ಅಥಣಿ (ಬೆಳಗಾವಿ): ಪುಣ್ಯಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ಗ್ರಾಮವೊಂದರಲ್ಲಿ ಸಂಬಂಧಿಕರು ಮತ್ತು ಸ್ಥಳೀಯರಿಗೆ ಭೋಜನಕೂಟ ಏರ್ಪಡಿಸಿ ಊಟ ಬಡಿಸಿದ್ದ ಮಹಿಳೆಯಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇದನ್ನೂ ಓದಿರಿ VIDEO| ಮಿಡತೆ ದಾಳಿಯ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದ ಸಿನಿಮಾ ಇದು!
ಅಥಣಿ ತಾಲೂಕಿನ 44 ಜನರು ಜಾರ್ಖಂಡ್ ರಾಜ್ಯದ ಧಾಮಿರ್ಕ ಕ್ಷೇತ್ರಕ್ಕೆ ಹೋಗಿ ಬಂದಿದ್ದರು. ಅವರಲ್ಲಿ ಸವದಿ ಗ್ರಾಮದ 7, ನಂದಗಾಂವ್ನ 3 ಹಾಗೂ ಬೆಳವಕ್ಕಿ, ಜುಂಜರವಾಡ ಮತ್ತು ಹುಕ್ಕೇರಿ ಪಟ್ಟಣದಲ್ಲಿ ತಲಾ 1 ಸೇರಿ ಒಟ್ಟು 13 ಜನರಲ್ಲಿ ಮಂಗಳವಾರ ಕರೊನಾ ದೃಢಪಟ್ಟಿತ್ತು. ಇವರಲ್ಲಿ ಸೋಂಕಿತ ಮಹಿಳೆಯೊಬ್ಬಳು ಧಾಮಿರ್ಕ ಕ್ಷೇತ್ರಕ್ಕೆ ಹೋಗಿ ಬಂದ ನಿಮಿತ್ತ ವಾಡಿಕೆಯಂತೆ ತನ್ನ ಬಂಧು, ಬಳಗದವರೆಲ್ಲರಿಗೂ ಭೋಜನಕೂಟ ಏರ್ಪಡಿಸಿ, ಖುದ್ದಾಗಿ ಎಲ್ಲರಿಗೂ ಅಡುಗೆ ಬಡಿಸಿದ್ದಳು.
ಇದನ್ನೂ ಓದಿರಿ VIDEO/ ರೈತರ ಕೊಳವೆಬಾವಿಯಲ್ಲಿ ನೀರಿನ ಬದಲು ಬೆಂಕಿ ಬರ್ತಿದೆ!
ಇದೀಗ ಆ ಮಹಿಳೆಯಲ್ಲಿ ಕೊರನಾ ಸೋಂಕು ದೃಢಪಟ್ಟಿರುವುದರಿಂದ ಖವಟಗೊಪ್ಪ ಗ್ರಾಮಸ್ಥರು ಸೇರಿ ಸುತ್ತಮುತ್ತಲ ಹಳ್ಳಿಯ ಜನರು ತಮ್ಮನೆಲ್ಲ ಕ್ವಾರಂಟೈನ್ ಮಾಡುತ್ತಾರೆ ಎಂಬ ಭಯದಲ್ಲಿದ್ದಾರೆ. ಕೆಲವರು ಕ್ವಾರಂಟೈನ್ಗೆ ಹೆದರಿ ಭೋಜನಕೂಟದಲ್ಲಿ ಭಾಗವಹಿಸಿರುವವರೂ ಅಲ್ಲಗಳೆಯುತ್ತಿದ್ದಾರೆ ಎನ್ನಲಾಗಿದೆ.
ಸೋಂಕಿತ ಮಹಿಳೆಯೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿರುವವರ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿರುವ ಆಶಾ, ಅಂಗನವಾಡಿ ಕಾರ್ಯಕರ್ತೆ, ಗ್ರಾಪಂ ಮತ್ತು ಪೊಲೀಸ್ ಸಿಬ್ಬಂದಿಗೆ ಪತ್ತೆ ಹಚ್ಚುವುದು ಸಮಸ್ಯೆ ಆಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಚಿಕ್ಕೋಡಿ ವಿಭಾಗದ ವೈದ್ಯಾಧಿಕಾರಿ ಡಾ. ಶೈಲಜಾ ತಿಳಿಸಿದ್ದಾರೆ.
ಇದನ್ನೂ ಓದಿರಿ ಮಂಡ್ಯದ ಮರುವನಹಳ್ಳಿಯಲ್ಲಿ ಸೋಂಕು ಹೆಚ್ಚಲು ಮಾವಿನಹಣ್ಣು ಕಾರಣವಂತೆ!