More

    ನೆಲ್ಯಾಡಿಯಲ್ಲಿ ಮತಾಂತರ ಶಂಕೆ, ಪ್ರಾರ್ಥನಾ ಮಂದಿರಕ್ಕೆ ಪೊಲೀಸ್ ದಾಳಿ

    ಪುತ್ತೂರು(ದ.ಕ.): ಹೊರಜಿಲ್ಲೆಯ ಜನರನ್ನು ಕರೆತಂದು ಮತಾಂತರ ಮಾಡಲಾಗುತ್ತಿದೆ ಎಂಬ ಹಿಂದು ಸಂಘಟನೆಗಳ ಮಾಹಿತಿ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಪೊಲೀಸರು ನೆಲ್ಯಾಡಿ ಸಮೀಪದ ಪ್ರಾರ್ಥನಾ ಮಂದಿರಕ್ಕೆ ದಾಳಿ ನಡೆಸಿದ್ದಾರೆ.
    ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದ ಆರ್ಯ ಎಂಬಲ್ಲಿರುವ ಪಾರ್ಥನೆ ಹಾಗೂ ಧ್ಯಾನ ಮಂದಿರಕ್ಕೆ ಪೊಲೀಸರು ದಾಳಿ ನಡೆಸಿದಾಗ, ಅಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ 40 ಮಂದಿ ವಾಸ್ತವ್ಯ ಇರುವುದು ಪತ್ತೆಯಾಗಿದೆ. 40 ಮಂದಿಗೂ ವಾಪಸ್ ಊರಿಗೆ ತೆರಳುವಂತೆ ಸೂಚಿಸಲಾಗಿದೆ.

    ಪ್ರತಿಭಟನೆ ಎಚ್ಚರಿಕೆ: ಪ್ರಕರಣಕ್ಕೆ ಸಂಬಂಧಿಸಿ ವಿಶ್ವ ಹಿಂದು ಪರಿಷದ್ ಮುಖಂಡ ಮುರಳಿಕೃಷ್ಣ ಹಸಂತಡ್ಕ ನೇತೃತ್ವದಲ್ಲಿ ಕಾರ್ಯಕರ್ತರ ತಂಡ ಉಪ್ಪಿನಂಗಡಿ ಠಾಣೆಗೆ ತೆರಳಿ ಮತಾಂತರ ಆರೋಪದಡಿ ದೂರು ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಹಿಂದು ಕಾರ್ಯಕರ್ತರು ಠಾಣೆ ಮುಂದೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts