ಮುಂಬೈ: ಖಲಿಸ್ತಾನಿ ಪ್ರತ್ಯೇಕವಾದಿಗಳ ಕುರಿತು ಸಹಾನುಭೂತಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಕೆನಡಾ ಮೂಲದ ಪಂಜಾಬಿ ಗಾಯಕ ಶುಭನೀತ್ ಸಿಂಗ್ ಅವರ ಮುಂಬೈ ಕಾನ್ಸರ್ಟ್ಅನ್ನು ಬುಕ್ ಮೈ ಶೋ ರದ್ದು ಮಾಡಿದೆ.
ಖಲಿಸ್ತಾನಿಗಳ ಪರ ಸಹಾನೂಭೂತಿ ಹೊಂದಿರುವ ಶುಭನೀತ್ ಸಿಂಗ್ ಕಾನ್ಸರ್ಟ್ ಆಯೋಜಿಸುತ್ತಿರುವ ಬುಕ್ ಮೈ ಶೋವನ್ನು ಎಲ್ಲರೂ ಬಹಿಷ್ಕರಿಸಬೇಕು. #UninstallBookmyshow ಎನ್ನು ಹ್ಯಾಶ್ಟ್ಯಾಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದನ್ನೂ ಓದಿ: ನುಹ್ ಹಿಂಸಾಚಾರ; ಕಾಂಗ್ರೆಸ್ ಶಾಸಕ ಮಾಮ್ಮನ್ ಖಾನ್ ನ್ಯಾಯಾಂಗ ವಶಕ್ಕೆ
ಇತ್ತ ಬಾಯ್ಕಾಟ್ ಕೂಗು ಜೋರಾದ ಬೆನ್ನಲ್ಲೇ ಪ್ರಕಟಣೆಯನ್ನು ಹೊರಡಿಸಿರುವ ಬುಕ್ ಮೈ ಶೋ ಶುಭನೀತ್ ಸಿಂಗ್ ಅವರ ಸ್ಟಿಲ್ ರೋಲಿನ್ ಟೂರ್ ಫಾರ್ ಇಂಡಿಯಾ ಕಾನ್ಸರ್ಟ್ಅನ್ನು ರದ್ದು ಮಾಡಲಾಗಿದೆ. ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಿದ ಗ್ರಾಹಕರಿಗೆ ಸಂಪೂರ್ಣ ಹಣವನ್ನು 7-10 ದಿನಗಳಲ್ಲಿ ಹಿಂತಿರುಗಿಸಲಾಗುವುದು ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಖಲಿಸ್ತಾನ ಪ್ರತ್ಯೇಕವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಬಳಿಕ ಉಭಯ ದೇಶಗಳ ಸರ್ಕಾರವು ರಾಜತಾಂತ್ರಿಕ ಅಧಿಕಾರಿಗಳನ್ನು ಸೇವೆಯಿಂದ ಉಚ್ಚಾಟಿಸಿ ಆದೇಶಿಸಿದ್ದವು. ಕೆನಡಾ ಪ್ರಧಾನಿ ಮಾಡಿರುವ ಆರ್ಓಪದಿಂದಾಗಿ ಉಭಯ ದೇಶಗಳ ನಡುವಿನ ಸಂಬಂಧ ಹಳಸಿದ್ದು, ವ್ಯಾಪಾರ-ವಹಿವಾಟು ಸಂಬಂಧ ನಡೆಯಬೇಕಿದ್ದ ಮಾತುಕತೆ ರದ್ದುಗೊಂಡಿದೆ.