ನವದೆಹಲಿ: ಛತ್ತೀಸ್ಗಢದ ಕಾಂಗ್ರೆಸ್ ನಾಯಕಿ ಹಾಗೂ ರಾಷ್ಟ್ರೀಯ ವಕ್ತಾರೆಯಾಗಿದ್ದ ರಾಧಿಕಾ ಖೇರಾ ಇದೀಗ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದು, ಇದರ ಹಿಂದಿದ್ದ ಬಲವಾದ ಕಾರಣವನ್ನು ಬಹಿರಂಗವಾಗಿ ತಿಳಿಸಿದ್ದಾರೆ. ಕಾಂಗ್ರೆಸ್ನ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ರಾಜೀನಾಮೆ ವಿಷಯ ಮಾತ್ರವಲ್ಲದೇ ತನಗೆ ಎದುರಾದ ಅವಮಾನ ಸೇರಿದಂತೆ ಕೆಲವು ಗಂಭೀರ ಆರೋಪಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ: ಬಂಧನದ ಬಳಿಕ ಎಚ್.ಡಿ.ರೇವಣ್ಣ ಮೊದಲ ಪ್ರತಿಕ್ರಿಯೆ
ರಾಜ್ಯ ಘಟಕದಲ್ಲಿ ನನ್ನನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು. ಅಗೌರವ ತೋರಲಾಗಿದೆ ಎಂದು ಪತ್ರದಲ್ಲಿ ಬರೆದಿರುವ ರಾಧಿಕಾ, ಅಯೋಧ್ಯೆಯಲ್ಲಿರುವ ಶ್ರೀ ರಾಮಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ಹಲವು ಮಾತುಗಳನ್ನು ಕೇಳಬೇಕಾಯಿತು ಎಂದಿದ್ದಾರೆ.
#WATCH | On her resignation from Congress, Congress National Media Coordinator Radhika Khera says, "Shri Ayodhya Dham, the birthplace of Ram Lalla, is a very sacred place for all of us and I could not stop myself from going there. But I had never thought in my life that I would… https://t.co/z2qbGjH5P8 pic.twitter.com/ktHpAKL6gt
— ANI (@ANI) May 5, 2024
“ಈ ವಿಷಯಕ್ಕಾಗಿ ಭಾರೀ ವಿರೋಧಗಳನ್ನು ಎದುರಿಸಬೇಕಾಯಿತು. ರಾಮಲಲ್ಲಾ ಮೂರ್ತಿಯ ದರ್ಶನ ಪಡೆದ ಕಾರಣ ಪಕ್ಷದೊಳಗೆ ಟೀಕೆಗಳು ಕೇಳಿಬಂದಿತು” ಎಂದು ಪತ್ರದ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್? ಫ್ಯಾನ್ಸ್ ಕಿಡಿ
ಈತ ಕ್ರೀಸ್ಗೆ ಬಂದ್ರೆ ಬೌಲರ್ಗಳೇ ಬೆವರುತ್ತಾರೆ! ಅಜಯ್ ಜಡೇಜಾ ಹೆಸರಿಸಿದ ಸ್ಟಾರ್ ಬ್ಯಾಟ್ಸ್ಮನ್ ಇವರೇ