ನವದೆಹಲಿ: ಗುಜರಾತ್ ಮೂಲದ ಕಿರಣ್ ಪಟೇಲ್ ಎಂಬಾತ ಪ್ರಧಾನಿ ಕಛೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿ ಎಂದು ಬಿಂಬಿಸಿಕೊಂಡು ಝೆಡ್ ಪ್ಲಸ್ ಸೆಕ್ಯುರಿಟಿ ಪಡೆದಿದ್ದಕ್ಕಾಗಿ ಬಂಧನಕ್ಕೆ ಈಡಾಗಿದ್ದಾನೆ. ಈತನನ್ನು ಶ್ರೀನಗರದ ಪಂಚತಾರಾ ಹೋಟೆಲ್ನಿಂದ ಪೊಲೀಸರು ಬಂಧಿಸಿದ್ದಾರೆ.
ಈ ‘ನಕಲಿ’ ಮನುಷ್ಯ ಕಿರಣ್ ಜೆ ಪಟೇಲ್ ವೆರಿಫೈಡ್ ಟ್ವಿಟರ್ ಹ್ಯಾಂಡಲ್ ಹೊಂದಿದ್ದ. ಈತನಿಗೆ ಸಾವಿರಕ್ಕೂ ಹೆಚ್ಚು ಅನುಯಾಯಿಗಳೂ ಇದ್ದಾರೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಕಾರ್ಯತಂತ್ರ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಸೋಗು ಹಾಕಿದ್ದ ಪಟೇಲ್, ಅವರು ಗುಲ್ಮಾರ್ಗ್ ಸೇರಿದಂತೆ ಕಾಶ್ಮೀರದ ಹಲವಾರು ಪ್ರವಾಸಿ ಸ್ಥಳಗಳಿಗೆ ಪ್ರಯಾಣಿಸಿದ್ದ. ಆ ಪ್ರದೇಶದಲ್ಲಿ ಹೋಟೆಲ್ ಸೌಲಭ್ಯಗಳನ್ನು ಸುಧಾರಿಸಲು ಸರ್ಕಾರವು ತನಗೆ ಜವಾಬ್ದಾರಿ ವಹಿಸಿದೆ ಎಂದು ಹೇಳಿಕೊಂಡಿದ್ದ.
The scenic valley of Gulmarg is a little piece of paradise cocooned by the mighty snow-clad mountains of the Pir Panjal range. Emerald green meadows, deep ravines and pine-forested hills make this meadow of flowers (the meaning of #Gulmarg) an ethereal sight.#Kashmir pic.twitter.com/XhPFUqWA6V
— Dr. Kiran J Patel (@bansijpatel) February 26, 2023
ಅದಷ್ಟೇ ಅಲ್ಲದೇ, ಈ ಗುಜರಾತ್ನ ವ್ಯಕ್ತಿಗೆ ಝಡ್ ಪ್ಲಸ್ ಭದ್ರತಾ ಕವರ್, ಬುಲೆಟ್ ಪ್ರೂಫ್ ಎಸ್ಯುವಿ ಮತ್ತು ಜಮ್ಮು ಮತ್ತು ಕಾಶ್ಮೀರದ ಪಂಚತಾರಾ ಹೋಟೆಲ್ನಲ್ಲಿ ಅಧಿಕೃತ ವಸತಿ ಸಹ ಸಿಕ್ಕಿತ್ತು. ಅದಷ್ಟೇ ಅಲ್ಲದೇ ಕಿರಣ್ ಪಟೇಲ್ ಶ್ರೀನಗರದ ಕ್ಲಾಕ್ ಟವರ್ ಲಾಲ್ ಚೌಕ್ ಮುಂದೆ ಭದ್ರತಾ ಸಿಬ್ಬಂದಿಯೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದ
ಆದರೂ, ಮಾರ್ಚ್ 3ರಂದು ಕಾಶ್ಮೀರ ಕಣಿವೆಗೆ ಆತನ ಮೂರನೇ ಭೇಟಿಯಲ್ಲಿ ಪಟೇಲ್ ಅವರನ್ನು ಭದ್ರತಾ ಅಧಿಕಾರಿಗಳು ಬಂಧಿಸಿದರು. ಶ್ರೀನಗರದ ಪಂಚತಾರಾ ಹೋಟೆಲ್ನಲ್ಲಿ ಕೇಂದ್ರದಲ್ಲಿ ‘ಹೆಚ್ಚುವರಿ ಕಾರ್ಯದರ್ಶಿ’ ಎಂದು ಪೋಸ್ ನೀಡಿದ್ದಕ್ಕಾಗಿ ಮತ್ತು ಇತರ ಆತಿಥ್ಯದ ಜೊತೆಗೆ ಭದ್ರತಾ ಕವರ್ ಅನುಭವಿಸಿದ್ದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.(ಏಜೆನ್ಸೀಸ್)