More

    ‘ಪ್ರಣಬ್​ ದಾ ಜನಮಾನಸದಲ್ಲಿ ಸದಾ ಶಾಶ್ವತ…’: ಸಿಎಂ ಯಡಿಯೂರಪ್ಪ, ಸಂಸದರು..ಸಚಿವರಿಂದ ಸಂತಾಪ

    ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿಯವರ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂತಾಪ ವ್ಯಕ್ತಪಡಿಸಿದ್ದಾರೆ.

    ಭಾರತರತ್ನ ಪ್ರಣಬ್​ ದಾ ಅವರ ಸಾವಿನ ಸುದ್ಧಿ ದುಃಖ ತಂದಿದೆ. ಪ್ರಣಬ್​ ಮುಖರ್ಜಿಯವರು ರಾಜಕೀಯ ಕುಶಲತೆ, ಅಪಾರ ಜ್ಞಾನ, ನೀತಿ ರಚನೆಗಳಿಂದ ಸದಾ ಜನಮಾನಸದಲ್ಲಿ ಉಳಿಯುತ್ತಾರೆ. ಅಗಲಿದ ಅವರ ಆತ್ಮಕ್ಕೆ ನನ್ನ ಗೌರವಪೂರ್ವಕ ನಮನಗಳು..ಓಂ ಶಾಂತಿ ಎಂದು ಸಿಎಂ ಟ್ವೀಟ್​ ಮಾಡಿದ್ದಾರೆ. ಇದನ್ನೂ ಓದಿ: ‘ದೆಹಲಿಗೆ ಹೊಸಬನಾಗಿದ್ದ ನನಗೆ ಮಾರ್ಗದರ್ಶನ ನೀಡಿ, ಆಶೀರ್ವದಿಸಿದವರು ಪ್ರಣಬ್​ ಮುಖರ್ಜಿ’ -ಪ್ರಧಾನಿ ಟ್ವೀಟ್​

    ಹಾಗೇ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿಯವರು ಟ್ವೀಟ್​ ಮಾಡಿ, ಭಾರತ ರತ್ನ, ಪದ್ಮವಿಭೂಷಣ, ಗೌರವಾನ್ವಿತ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ವಿಧಿವಶರಾಗಿದ್ದು, ತೀವ್ರ ಆಘಾತವನ್ನುಂಟುಮಾಡಿದೆ. ಅವರ ಆತ್ಮಕ್ಕೆ ದೇವರು ಸದ್ಗತಿ ನೀಡಲಿ. ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಸಂಸದರಾದ ಸುಮಲತಾ ಅಂಬರೀಷ್​, ಪ್ರತಾಪ್​ ಸಿಂಹ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಡಾ. ಕೆ.ಸುಧಾಕರ್, ಸುರೇಶ್​ ಕುಮಾರ್​​​​ ಮತ್ತಿತರರು ಸಾಮಾಜಿಕ ಜಾಲತಾಣಗಳ ಮೂಲಕ ಪ್ರಣಬ್​ ಮುಖರ್ಜಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts