ಸುಶಾಂತ್ ಸಿಂಗ್ ಸಾವಿನ ವಿಚಾರಣೆ ಕುರಿತು ಮುಂಬೈ ಪೊಲೀಸ್ ವರ್ಸಸ್ ಬಿಹಾರ ಪೊಲೀಸ್ ಎಂಬ ಬಣಗಳು ಶುರುವಾಗಿವೆ. ಎರಡು ರಾಜ್ಯಗಳ ಪೊಲೀಸರ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕಿನ ಗುದ್ದಾಟ ಏರ್ಪಟ್ಟಿದೆ. ಮುಂಬೈನಲ್ಲಿ ಬೀಡು ಬಿಟ್ಟಿರುವ ಬಿಹಾರ ಪೊಲೀಸರ ತನಿಖೆಗೆ ಮುಂಬೈ ಪೊಲೀಸ್ ಕೈ ಜೋಡಿಸುತ್ತಿಲ್ಲ. ಈ ನಡುವೆಯೇ ಇದೀಗ ಸುಶಾಂತ್ ಸಾವಿನ ಪ್ರಕರಣದಲ್ಲಿ ಸಿಬಿಐ ತನಿಖೆಗೆ ಬಿಹಾರ ಸಿಎಂ ನಿತೀಶ್ ಕುಮಾರ್, ಕೇಂದ್ರಕ್ಕೆ ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಸಿಎಂಗೆ ಕ್ವಾರಂಟೈನ್ … ಕನ್ನಡ ಚಿತ್ರರಂಗದ ಸಭೆ ಮುಂದಕ್ಕೆ
ಈಗಾಗಲೇ ಸುಶಾಂತ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ತಂದೆ ಕೆಕೆ ಸಿಂಗ್ ಪಾಟ್ನಾದ ರಾಜೀವ್ ನಗರದ ಪೊಲೀಸ್ ಠಾಣೆಯಲ್ಲಿ ರಿಯಾ ವಿರುದ್ಧದ ದೂರಿನಲ್ಲಿ ನಮೂದಿಸಿದ್ದರು. ಇದಾದ ಬಳಿಕ ಬಿಹಾರ ಪೊಲೀಸ್ ತಂಡ ತನಿಖೆ ಚುರುಕುಗೊಳಿಸಿತ್ತು. ರಿಯಾ ಮತ್ತು ಸಾವಿನ ವಿಚಾರಣೆಗೆ ಮುಂಬೈಗೆ ಬಂದಿತ್ತು. ಆದರೆ, ಬಿಹಾರ ಪೊಲೀಸ್ಗೆ ಮುಂಬೈ ಪೊಲೀಸರಿಂದ ಸಹಕಾರ ಸಿಕ್ಕಿರಲಿಲ್ಲ. ಇದೆಲ್ಲವನ್ನು ಗಮನಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ: ಮಗುವಿನ ಬಗ್ಗೆ ನತಾಶಾಗೆ ಹಾರ್ದಿಕ್ ಪಾಂಡ್ಯ ಹೇಳಿದ್ದೇನು ಗೊತ್ತೇ?
ಈ ಬಗ್ಗೆ ಕೆಕೆ ಸಿಂಗ್ ಪರ ವಕೀಲ ವಿಕಾಸ್ ಸಿಂಗ್ ಸಹ ಪ್ರತಿಕ್ರಿಯಿಸಿದ್ದಾರೆ. ‘ಮುಂಬೈ ಪೊಲೀಸರು ಒಂದಷ್ಟು ಮಹತ್ವದ ದಾಖಲೆಗಳನ್ನು ನಾಶಪಡಿಸುತ್ತಿದ್ದಾರೆ. ಹಾಗಾಗಿ ಇದನ್ನು ಸಿಬಿಐಗೆ ನೀಡಬೇಕೆಂದು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಚರ್ಚೆ ಮಾಡಲಾಗಿತ್ತು. ಅದರ ಅನ್ವಯ ಪ್ರಕರಣವನ್ನು ಸಿಬಿಐಗೆ ನೀಡುವ ಬಗ್ಗೆ ನಿತೀಶ್ ಕುಮಾರ್ ಅನುಮೋದನೆ ನೀಡಿದ್ದಾರೆ. (ಏಜೆನ್ಸೀಸ್)
ಅಮೂಲ್ ಕಾರ್ಟೂನ್ನಲ್ಲಿ ಬಿಗ್ಬಿ; ಟ್ರೋಲ್ ಮಾಡಿದವರಿಗೆ ಬಚ್ಚನ್ ತಿರುಗೇಟು!