More

    ಸಿಎಂ ಬೊಮ್ಮಾಯಿ ಹೀರೋ.. ಮಾಜಿ ಸಿಎಂ ಯಡಿಯೂರಪ್ಪ ಅವರೇ ಡೈರೆಕ್ಟರ್!

    ತುಮಕೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೀರೋ. ಆದರೆ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರೇ ಡೈರೆಕ್ಟರ್​. ಹೀಗೆಂದು ಸಚಿವ ಬಿ.ಶ್ರೀರಾಮುಲು ಹೇಳಿದ್ದು, ಮುಂದಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಇಂದು ತುಮಕೂರಿನಲ್ಲಿ ಮಾತನಾಡಿರುವ ಶ್ರೀರಾಮುಲು ಈ ವಿಷಯ ಬಹಿರಂಗಪಡಿಸಿದ್ದಾರೆ.

    ಹೀರೋ-ಡೈರೆಕ್ಟರ್​ ಎಂದ ಮಾತ್ರಕ್ಕೆ ಯಾವುದೋ ಹೊಸ ಸಿನಿಮಾದ ವಿಚಾರ ಎಂದು ಕಣ್ಣರಳಿಸಿ ನೋಡುವಂತಿಲ್ಲ. ಏಕೆಂದರೆ ಶ್ರೀರಾಮುಲು ಹೀಗೆ ಹೇಳಿರುವುದು ಮುಂದಿನ ಚುನಾವಣೆಯ ದೃಷ್ಟಿಯಲ್ಲಿ. ಮುಂದಿನ ಚುನಾವಣೆಯಲ್ಲಿ ರಾಜಕೀಯ ತಂತ್ರಗಳು ಹೇಗಿರಲಿವೆ ಎಂಬುದನ್ನು ಅವರು ಸಿನಿಮೀಯವಾಗಿಯೇ ಹೇಳಿದ್ದಾರೆ.

    ಇದನ್ನೂ ಓದಿ: ಬೀಗ ಮುರಿದು ಮನೆಯೊಳಗೆ ನುಗ್ಗಿದ ಕಳ್ಳರು; 31 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 14.50 ಲಕ್ಷ ರೂ. ಕಳವು

    ಮುಂದಿನ ಚುನಾವಣೆ ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯುತ್ತದೆ. ಇದನ್ನು ನಮ್ಮ ಕೇಂದ್ರ ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ. ಹಾಗಂತ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿದ್ದಾರೆ ಅಂತಲ್ಲ. ಸಿನಿಮಾದಲ್ಲಿ ಹೀರೋ ಎಷ್ಟೇ ಒಳ್ಳೆಯ ಆ್ಯಕ್ಟ್ ಮಾಡಿ ಜನರನ್ನು ಆಕರ್ಷಣೆ ಮಾಡಿದರೂ ಅದರಲ್ಲಿ ನಿರ್ದೇಶಕರ ಪಾತ್ರ ಮುಖ್ಯವಾಗಿರುತ್ತದೆ.

    ಇದನ್ನೂ ಓದಿ: ಗೆಳೆಯನ ಮೀನು ತಿನ್ನುವ ಆಸೆ ತೀರಿಸಲು ಹೋಗಿ ತಾನೇ ತೀರಿಹೋದ!

    ಸಿನಿಮಾದಲ್ಲಿ ಹೀರೋಗಿಂತ ದೊಡ್ಡ ಶಕ್ತಿ ನಿರ್ದೇಶಕರಿಗೆ ಇರುತ್ತದೆ. ಹಾಗಾಗಿ ನಮ್ಮ ಪಾರ್ಟಿಯಲ್ಲಿ ಯಡಿಯೂರಪ್ಪನವರಿಗೆ ದೊಡ್ಡ ಶಕ್ತಿ ಇದೆ. ಅವರ ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ ನಡೆಯಲಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

    ಇವಳು ಊರಿನವರ ನಿದ್ದೆ ಕೆಡಿಸಿದ ಮಹಿಳೆ; 40 ವರ್ಷಗಳಿಂದ ನಿದ್ರೆಯನ್ನೇ ಮಾಡಿಲ್ವಂತೆ!

    ಸ್ನಾನಕ್ಕೆಂದು ಹೋಗಿದ್ದ ಎಂಬಿಬಿಎಸ್​ ವಿದ್ಯಾರ್ಥಿನಿ ಸಾವು; 2 ಗಂಟೆ ಬಳಿಕ ಬಾತ್​ರೂಮ್​ ಬಾಗಿಲು ಮುರಿದು ನೋಡಿದ ಮನೆಯವರಿಗೆ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts