More

    ಲೋಕಸಭಾ ಚುನಾವಣೆಗೂ ಮುನ್ನವೇ ಜಾರಿಯಾಯ್ತು ಸಿಎಎ: ಕೇಂದ್ರದಿಂದ ಕೊನೆಗೂ ಅಧಿಸೂಚನೆ ಪ್ರಕಟ

    ನವದೆಹಲಿ: ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ. ಸಿಎಎ ಜಾರಿ ಸಂಬಂಧ ಇಂದು (ಮಾರ್ಚ್​ 11) ಕೇಂದ್ರ ಗೃಹ ಇಲಾಖೆ ಅಧಿಸೂಚನೆಯನ್ನು ಪ್ರಕಟಿಸಿದೆ.

    ಸಿಎಎ ಕಾಯ್ದೆ ಸಂಸತ್ತಿನಲ್ಲಿ ಅಂಗೀಕಾರವಾದ 4 ವರ್ಷಗಳ ಬಳಿಕ ಜಾರಿಗೆ ಬಂದಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಸಿಎಎ ಜಾರಿ ಮಾಡಲಾಗುವುದು ಮತ್ತು ಈ ಸಂಬಂಧ ನೀತಿ-ನಿಯಮಗಳನ್ನು ಹೊರಡಿಸಲಾಗುವುದು ಎಂದು ಕಳೆದ ತಿಂಗಳಷ್ಟೇ ಗೃಹ ಸಚಿವ ಅಮಿತ್​ ಷಾ ಅವರು ಹಲವು ವೇದಿಕೆಗಳಲ್ಲಿ ಹೇಳಿದ್ದರು. ಭರವಸೆಯಂತೆಯೇ ಕೊನೆಗೂ ಸಿಎಎ ಜಾರಿಯಾಗಿದೆ.

    2019, ಡಿಸೆಂಬರ್​ 11ರಂದು ಸಂಸತ್ತಿನಲ್ಲಿ ಸಿಎಎ ಕಾಯ್ದೆ ಅಂಗೀಕಾರವಾಗಿತ್ತು. ಈ ಸಂದರ್ಭದಲ್ಲಿ ಸಿಎಎ ಕುರಿತು ರಾಷ್ಟ್ರವ್ಯಾಪಿ ಸಾಕಷ್ಟು ಚರ್ಚೆಯಾಗಿತ್ತು ಮತ್ತು ಪ್ರತಿಭಟನೆಗಳು ಸಹ ನಡೆದಿದ್ದವು. ಸಿಎಎ ವಿಚಾರದಲ್ಲಿ ಅನೇಕರು ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಸೃಷ್ಟಿಸಿದ್ದರು. ಆದರೆ, ಕೇಂದ್ರ ಸರ್ಕಾರ ಗೊಂದಲ ಪರಿಹರಿಸುವ ಪ್ರಯತ್ನ ಮಾಡುತ್ತಲೇ ಬಂದಿತು. ಸುಮಾರು 4 ವರ್ಷಗಳ ಬಳಿಕ ಕೊನೆಗೂ  ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದಿದೆ.

    ಏನಿದು ಸಿಎಎ?
    ಸಿಎಎ, 1955ರ ಪೌರತ್ವ ಕಾಯ್ದೆಯ ತಿದ್ದುಪಡಿಯಾಗಿದೆ. ಧಾರ್ಮಿಕ ಕಿರುಕುಳವನ್ನು ತಾಳಲಾರದೇ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ 2014ರ ಡಿಸೆಂಬರ್​ 31ಕ್ಕೂ ಮುಂಚೆ ಭಾರತಕ್ಕೆ ಆಗಮಿಸಿರುವ ಸಿಖ್​, ಬೌದ್ಧರು, ಕ್ರಿಶ್ಚಿಯನ್​, ಜೈನರು ಮತ್ತು ಪಾರ್ಸಿಗಳಿಗೆ ಸಿಎಎ ಅಡಿಯಲ್ಲಿ ಭಾರತದ ಪೌರತ್ವವನ್ನು ನೀಡಲಾಗುತ್ತದೆ. (ಏಜೆನ್ಸೀಸ್​)

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತ ಬಾಂಬರ್ ಯಾರೆಂಬುದು ಬಹುತೇಕ ಪತ್ತೆಯಾಗಿದೆ ಎಂದ ಗೃಹಸಚಿವ ಪರಮೇಶ್ವರ್

    ದಕ್ಷಿಣದಲ್ಲಿ ಎನ್‌ಡಿಎಗೆ 38, ‘I.N.D.I.A’ 60ರಲ್ಲಿ ಗೆಲುವು: ಕರ್ನಾಟಕದಲ್ಲಿ ‘ಕೈ’ಗೆ ಕೇವಲ 4ಸ್ಥಾನ! ಸಮೀಕ್ಷೆ ವಿವರ ಇಲ್ಲಿದೆ ನೋಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts