ಮುಂಬೈ: ಲಾಕ್ಡೌನ್ನಿಂದ ಕಳೆದ ಏಳು ತಿಂಗಳುಗಳಿಂದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈ ಸಂದರ್ಭದಲ್ಲಿ ಕೆಲವು ಚಿತ್ರಗಳು ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಿವೆ. ಅಂತಹ ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ಈಗ ಚಿತ್ರಮಂದಿರದವರು ತೀರ್ಮಾನಿಸಿದ್ದಾರೆ.
ನಾಳೆಯಿಂದ (ಅಕ್ಟೋಬರ್ 15) ಚಿತ್ರಪ್ರದರ್ಶನವನ್ನು ಪ್ರಾರಂಭಿಸುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಅದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಒಂದಿಷ್ಟು ಚಿತ್ರಗಳು ಏಳು ತಿಂಗಳುಗಳ ನಂತರ ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿವೆ. ಈ ಪೈಕಿ ಹೊಸದಾಗಿ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರವನ್ನೇ ಪ್ರಾಯೋಗಿಕವಾಗಿ ಪ್ರದರ್ಶಿಸಲು ಚಿತ್ರಮಂದಿರಗಳು ಯೋಚಿಸಿವೆ.
ಇದನ್ನೂ ಓದಿ: ಸುನಿ ಜನ್ಮದಿನಕ್ಕೆ ‘ರಾಬಿನ್ ಹುಡ್’ ಸಿನಿಮಾ ಘೋಷಣೆ; ಪುಷ್ಕರ್ ಹೆಗಲಿಗೆ ನಿರ್ಮಾಣದ ಹೊಣೆ
ಈ ನಿಟ್ಟಿನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಯಾವ ಚಿತ್ರವನ್ನು ಸಹ ಬಿಡುಗಡೆ ಮಾಡಬಾರದು ಎಂಬ ತೀರ್ಮಾನಕ್ಕೆ ಪಿವಿಆರ್, ಸಿನಿಪೊಲಿಸ್, ಇನಾಕ್ಸ್, ಕಾರ್ನಿವಲ್ ಮುಂತಾದ ಮಲ್ಟಿಪ್ಲೆಕ್ಸ್ಗಳು ತೀರ್ಮಾನಕ್ಕೆ ಬಂದಿವೆ ಎಂದು ಹೇಳಲಾಗುತ್ತಿವೆ. ಏಕೆಂದರೆ, ಈ ಹಿಂದೆ ಕೆಲವು ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ರಸ್ತಾಪವಾದಾಗ, ಚಿತ್ರಮಂದಿರದವರು ಅದರಲ್ಲೂ ಮಲ್ಟಿಪ್ಲೆಕ್ಸ್ನವರು ಇದನ್ನು ವಿರೋಧಿಸಿದ್ದರು. ಚಿತ್ರಮಂದಿರಗಳು ಚಿತ್ರಗಳನ್ನೇ ನಂಬಿ ಬದುಕುತ್ತಿರುವುದರಿಂದ, ಅವುಗಳನ್ನು ಕಡೆಗಣಿಸಿ ಓಟಿಟಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಸೂಚಿಸಿದ್ದವು.
ಇದನ್ನೂ ಓದಿ: ಉಸಿರಾಟದ ಸಮಸ್ಯೆ ಸುತ್ತ ಹೊಸಬರ ಸಿನಿಮಾ; ‘ಡಿಸೆಂಬರ್ 24’ ರಂದು ನಡೆಯುವುದೇನು?
ಆದರೆ, ‘ಗುಲಾಬೋ ಸಿತಾಬೋ’, ‘ದಿಲ್ ಬೇಚಾರಾ’, ‘ಗುಂಜನ್ ಸಕ್ಸೇನಾ’, ‘ಸಡಕ್ 2’, ‘ಶಕುಂತಲಾ ದೇವಿ’, ‘ಖುದಾ ಹಾಫೀಜ್’ ಸೇರಿದಂತೆ ಹಲವು ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಆ ಚಿತ್ರಗಳನ್ನು ಮಲ್ಟಿಪ್ಲೆಕ್ಸ್ನಲ್ಲಿ ಬಿಡುಗಡೆ ಮಾಡಬಾರದು ಎಂಬ ತೀರ್ಮಾನಕ್ಕೆ ಹಲವರು ಬಂದಿದ್ದಾರೆನ್ನಲಾಗಿದೆ.
ಅದರ ಬದಲು, ಲಾಕ್ಡೌನ್ಗೂ ಮುನ್ನ ಬಿಡುಗಡೆಯಾದ ‘ತಾನ್ಹಾಜಿ’, ‘ತಪ್ಪಡ್’, ‘ಮಲಾಂಗ್’, ‘ಶುಭ್ ಮಂಗಲ್ ಜ್ಯಾದಾ ಸಾವಧಾನ್’, ‘ವಾರ್’, ‘ಭಾಗಿ 3’ ಮುಂತಾದ ಚಿತ್ರಗಳನ್ನು ದೇಶಾದ್ಯಂತ ಬಿಡುಗಡೆ ಮಾಡುವ ಯೋಚನೆ ಇದ್ದು, ಆ ಚಿತ್ರಗಳ ಮೂಲಕ ಮಲ್ಟಿಪ್ಲೆಕ್ಸ್ನಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುವ ಸಾಧ್ಯತೆ ಇದೆ.
ಪಾಯಲ್ಗೆ ಬೇಕಿದೆ ‘ನಿಮ್ಮೆಲ್ಲರ ಆಶೀರ್ವಾದ’; ಭಿನ್ನ ಬೆಡಗಿಯ ವಿಭಿನ್ನ ಸಿನಿಮಾ