ಬೆಂಗಳೂರು: ವಿಜಯಾನಂದ ನಗರದ ನಂದಿನಿ ಲೇಔಟ್ನಲ್ಲಿ ಪಾರಿವಾಗಳನ್ನು ಹಿಡಿಯಲು ಹೋದ ಬಾಲಕರು ತಮ್ಮ ಜೀವಕ್ಕೇ ಅಪಾಯ ತಂದೊಡ್ಡಿದ್ದರು. ಪಾರಿವಾಳ ಹಿಡಿಯಲು ಹೋದಾಗ ವಿದ್ಯುತ್ ಹೈಟೆನ್ಶನ್ ವೈರ್ ತಾಗಿ, ಇಬ್ಬರೂ ಜೀವನ್ಮರಣದ ಹೋರಾಟ ನಡೆಸುವಂತಾಗಿತ್ತು. ಡಿ.4 ರಂದು ಬಾಲಕ ಸುಪ್ರೀತ್ ಮೃತಪಟ್ಟಿದ್ದ. ಇದೀಗ ಮತ್ತೊಬ್ಬ ಬಾಲಕ ಚಂದ್ರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಚಂದ್ರು ಹಾಗೂ ಸುಪ್ರೀತ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸದ್ಯ ವಿಕ್ಟೋರಿಯ ಆಸ್ಪತ್ರೆಯ ಶವಗಾರಕ್ಕೆ ಮೃತದೇಹವನ್ನು ರವಾನೆ ಮಾಡಲಾಗಿ, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಚಂದ್ರು ದೇಹ ನೀಡಲಿದ್ದಾರೆ.