ಚಿಕ್ಕಮಗಳೂರು: ನಾಗರಹಾವು ಕಡಿತಕ್ಕೆ ಒಳಗಾದ ಮಹಿಳೆಗೆ ಚುಚ್ಚುಮದ್ದು ಸಿಗದೇ ಸಾವಿಗೀಡಾಗಿರುವ ಮನಕಲಕುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಗ್ರಾಮದ ಶಾರದಮ್ಮ ( 60) ಮೃತ ದುರ್ದೈವಿ. ಸುಮಾರು 3 ಗಂಟೆ ಆಸ್ಪತ್ರೆಗಳಿಂದ ಆಸ್ಪತ್ರೆಗೆ ಅಲೆದಾಡಿದರು ಚುಚ್ಚುಮದ್ದು ಮಾತ್ರ ಸಿಗಲೇ ಇಲ್ಲ. ಈ ವೈದ್ಯಕೀಯ ನಿರ್ಲಕ್ಷ್ಯಕ್ಕೆ ಜೀವ ಒಂದು ಬಲಿಯಾಗಿದೆ.
ಜಿಲ್ಲಾಸ್ಪತ್ರೆ ಸೇರಿದಂತೆ ತಾಲೂಕು ಆಸ್ಪತ್ರೆಗಳಲ್ಲಿ ಹಾವು ಕಡಿತದ ಚುಚ್ಚುಮದ್ದು ಇಲ್ಲ. ಕಾಫಿನಾಡಿನಲ್ಲಿ ಎಲ್ಲಿಯೂ ಎಎಸ್ವಿ ಚುಚ್ಚುಮದ್ದು ಸ್ಟಾಕ್ ಇಲ್ಲ. ಅದರಲ್ಲೂ ವೈದ್ಯಕೀಯ ಕಾಲೇಜು ಹಣೆಪಟ್ಟಿ ಹೊತ್ತಿರುವ ಜಿಲ್ಲೆಯಲ್ಲೇ ಚುಚ್ಚುಮದ್ದು ಇಲ್ಲದಿರುವುದು ತಲೆತಗ್ಗಿಸುವಂತಹ ವಿಚಾರವಾಗಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಆರೋಗ್ಯ ಇಲಾಖೆ ವಿರುದ್ದ ಜನರ ಆಕ್ರೋಶ ವ್ಯಕ್ತವಾಗಿದೆ. ಆರೋಗ್ಯ ಸಚಿವರೇ ಈ ನಿರ್ಲಕ್ಷ್ಯಕ್ಕೆ ಯಾರು ಹೊಣೆ? ಎಂದು ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)
ಪದ್ಮಶ್ರೀ ಪ್ರಶಸ್ತಿ ತಿರಸ್ಕರಿಸಿದ ಲೆಂಜೆಂಡರಿ ಗಾಯಕಿ ಸಂಧ್ಯಾ ಮುಖರ್ಜಿ! ಅವರು ಕೊಟ್ಟ ಕಾರಣ ಹೀಗಿದೆ…
3 ಸಾವಿರ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಯೋಜನೆ ಆರಂಭ: ಸಿಎಂ ಬಸವರಾಜ ಬೊಮ್ಮಾಯಿ
Phone Pay ಸ್ಕ್ಯಾನರ್ ಬದಲಿಸಿ ಸ್ವಂತ ಖಾತೆಗೆ ಲಕ್ಷಾಂತರ ಹಣ ವರ್ಗಾಯಿಸಿಕೊಂಡ! ಕೆಲಸ ಕೊಟ್ಟ ಮಾಲೀಕನಿಗೇ ವಂಚನೆ