ಚಿತ್ರದುರ್ಗ: ಇಲ್ಲೊಂದು ಚೆಕ್ಡ್ಯಾಮ್ಗೆ ಸಾಲಾಗಿ ಪೈಪ್ಗಳನ್ನು ಜೋಡಿಸಿ ನೀರನ್ನು ಖಾಲಿ ಮಾಡಲಾಗುತ್ತಿದೆ. ಈ ದೃಶ್ಯವನ್ನು ಆತಂಕದಿಂದಲೇ ಜನರು ವೀಕ್ಷಿಸುತ್ತಿದ್ದು, ಮತ್ತಷ್ಟು ಜನ ಜಮಾಯಿಸುತ್ತಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬೂತಯ್ಯನಹಟ್ಟಿಯ ಚೆಕ್ಡ್ಯಾಮ್ನಲ್ಲಿ ಇಂಥದ್ದೊಂದು ದೃಶ್ಯ ಕಂಡುಬಂದಿದೆ. ಅಷ್ಟಕ್ಕೂ ಹೀಗೆ ಪೈಪ್ ಮೂಲಕ ಚೆಕ್ಡ್ಯಾಂ ನೀರನ್ನು ಖಾಲಿ ಮಾಡಲಾಗುತ್ತಿರುವುದು 19 ವರ್ಷದ ಒಬ್ಬ ಯುವಕನಿಗಾಗಿ.
ಇದನ್ನೂ ಓದಿ: ಶಾರುಖ್ ಪುತ್ರ ಆರ್ಯನ್ ಖಾನ್ಗೆ ಜಾಮೀನು ಸಿಗಲು ಕಾರಣವೇನು ಗೊತ್ತೇ?; ಇಲ್ಲಿದೆ ಮಾಹಿತಿ..
ಇಲ್ಲಿನ ಬೆಳಗಟ್ಟ ಗ್ರಾಮದ ಹರೀಶ್ ಕುಮಾರ್ (19) ಎಂಬಾತ ಈ ಚೆಕ್ಡ್ಯಾಮ್ನಲ್ಲಿ ಈಜಲು ತೆರಳಿದ್ದು, ನೀರುಪಾಲಾಗಿದ್ದಾನೆ. ಆತನ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರೂ ಸುಳಿವು ಸಿಕ್ಕಿಲ್ಲ.
ಇದನ್ನೂ ಓದಿ: ಅಕ್ರಮ ತಡೆಯಲು ಮುಂದಾದವರ ಮೇಲೆಯೇ ಹಲ್ಲೆ, ಕೊಲೆ ಬೆದರಿಕೆ; ಪಡಿತರ ಕಳ್ಳಸಾಗಣೆಕೋರನ ತಂಡದಿಂದ ಥಳಿತ
ಹೀಗಾಗಿ ಹಲವಾರು ಪೈಪ್ಗಳ ಮೂಲಕ ಚೆಕ್ಡ್ಯಾಂ ನೀರನ್ನು ಖಾಲಿ ಮಾಡಲಾಗುತ್ತಿದೆ. ಇನ್ನೂ ನೀರು ಖಾಲಿ ಮಾಡುವ ಪ್ರಕ್ರಿಯೆ ಮುಂದುವರಿದಿದ್ದು, ಸ್ಥಳೀಯು ಚೆಕ್ಡ್ಯಾಂ ಬಳಿ ಜಮಾಯಿಸಿ ವೀಕ್ಷಿಸಲಾರಂಭಿಸಿದ್ದಾರೆ.
ಹರಾಜಿಗಿದೆಯಂತೆ ಮಂಡ್ಯ ಎಸ್ಪಿ ಹುದ್ದೆ; ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ