ನವದೆಹಲಿ: ಕರೊನಾ ಸಂಕಷ್ಟ ತಡೆಗಟ್ಟಲು ವಿಧಿಸಲಾಗಿದ್ದ ನಿರ್ಬಂಧಗಳನ್ನು ಕೇಂದ್ರ ಸರ್ಕಾರ ಹಂತಹಂತವಾಗಿ ತೆರವು ಗೊಳಿಸುತ್ತಿದೆ. ಅದರಂತೆ ಆಗಸ್ಟ್ 31ರವರೆಗೆ ಹಲವು ನಿರ್ಬಂಧಗಳನ್ನು ತೆರವುಗೊಳಿಸಿ ಆದೇಶಿಸಿತ್ತು. ಈಗ ಅನ್ಲಾಕ್ 4 ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಪ್ರಮುಖವಾಗಿ ಸೆ.7ರಿಂದ ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಂತಹಂತವಾಗಿ ಮೆಟ್ರೋ ಪ್ರಯಾಣ ಆರಂಭವಾಗಲಿದೆ.
ಇದನ್ನೂ ಓದಿ; ಪುನರಾರಂಭದವರೆಗೆ ಶಾಲೆಗಳು ವಾರ್ಷಿಕ, ಅಭಿವೃದ್ಧಿ ಶುಲ್ಕ ಪಡೆಯುವಂತಿಲ್ಲ; ದೆಹಲಿ ಹೈಕೋರ್ಟ್ ಮಹತ್ವದ ಆದೇಶ
ಇನ್ನೊಂದು ಮುಖ್ಯ ಸಂಗತಿ ಎಂದರೆ, ಧಾರ್ಮಿಕ, ರಾಜಕೀಯ ಹಾಗೂ ಇತರ ಸಭೆ- ಸಮಾರಂಭಗಳನ್ನು ಸೆ.21ರಿಂದ ನಡೆಸಬಹುದು. ಆದರೆ, ಇದರಲ್ಲಿ 100 ಜನರಷ್ಟೇ ಭಾಗವಹಿಸಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಆದರೆ, ಶಾಲಾ- ಕಾಲೇಜು ಹಾಗೂ ಸ್ವಿಮ್ಮಿಂಗ್ ಪೂಲ್, ಒಳಾಂಗಣ ಥಿಯೇಟರ್ಗಳು ಬಂದ್ ಇರಲಿವೆ. ಈ ನಿರ್ಬಂಧಗಳು ಸೆಪ್ಟಂಬರ್ 30ರವರೆಗೆ ಅನ್ವಯಿಸಲಿವೆ.
ಜತೆಗೆ, ಸಾರ್ವಜನಿಕ ಉದ್ಯಾನಗಳು, ಮನೋರಂಜನಾ ಕೇಂದ್ರಗಳು ಹಾಗೂ ಬೃಹತ್ ಪ್ರಮಾಣದಲ್ಲಿ ಜನರು ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹಂದಿ ಮಿದುಳಿನಲ್ಲಿ ಕಂಪ್ಯೂಟರ್ ಚಿಪ್; ಶೀಘ್ರದಲ್ಲಿ ಮಾನವರಿಗೂ ಅಳವಡಿಕೆ; ಆಸಕ್ತರಿಗಾಗಿ ನಡೆದಿದೆ ಹುಡುಕಾಟ…!