More

    ಸುಶಾಂತ್​ ಸಾವಿನ ತನಿಖೆ ಇನ್ನೂ ಮುಗಿದಿಲ್ಲ: ಸಿಬಿಐ

    ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಅಸಹಜ ಸಾವಿನ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸೆಂಟ್ರಲ್​ ಬ್ಯೂರೋ ಆಫ್​ ಇನ್ವೆಸ್ಟಿಗೇಶನ್​ (ಸಿಬಿಐ) ಸಂಸ್ಥೆಯು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂದು ಸ್ಪಷ್ಟಪಡಿಸಿದೆ.

    ಇದನ್ನೂ ಓದಿ: ಬಾಲಿವುಡ್​ನ ಮೊದಲ ಆಕ್ಷನ್​ ಹೀರೋಯಿನ್​ ಆಗಲು ಹೊರಟಿದ್ದಾರೆ ಕಂಗನಾ!

    ಸುಶಾಂತ್​ ಸಿಂಗ್​ ರಜಪೂತ್, ಜೂನ್​ 14ರಂದು ಮುಂಬೈನ ತಮ್ಮ ಫ್ಲಾಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅಸಹಜ ಸಾವಿನ ಬಗ್ಗೆ ಗೊಂದಲವಿದ್ದುದರಿಂದ, ಅವರ ಕೇಸ್​ನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು. ಈ ವಿಷಯದಲ್ಲಿ ಸಾಕಷ್ಟು ತನಿಖೆ ಮಾಡಿದ ಸಿಬಿಐ ಅಧಿಕಾರಿಗಳು, ಸುಶಾಂತ್​ ಸಿಂಗ್​ ಅವರದ್ದು ಕೊಲೆ ಎಂದು ಹೇಳುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದರು.

    ಯಾವಾಗ ಸಿಬಿಐ ಅಧಿಕಾರಿಗಳು ಹೀಗೆ ಹೇಳಿದ್ದಾರೆ ಎಂಬ ಸುದ್ದಿ ಹರಡಿತೋ, ಆಗಿನಿಂದ ಸಿಬಿಐನವರು ಸದ್ಯದಲ್ಲೇ ಈ ಕೇಸ್​ ಬಂದ್​ ಮಾಡಲಿದ್ದಾರೆ ಎಂಬ ಮಾತು ಕೇಳಿಬಂತು. ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ ಸಿಬಿಐನವರು ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಯಿತು.

    ಇದನ್ನೂ ಓದಿ: VIDEO| ಜೂ.ಚಿರು ಸ್ವಾಗತಕ್ಕೆ ಸರ್ಜಾ ಫ್ಯಾಮಿಲಿಯಿಂದ ಸ್ಪೆಷಲ್​ ವಿಡಿಯೋ

    ಇದಕ್ಕೆ ಪ್ರತಿಕ್ರಿಯಿಸಿರುವ ಸಿಬಿಐ, ಸುಶಾಂತ್​ ಸಾವಿನ ತನಿಖೆ ಇನ್ನೂ ಮುಗಿದಿಲ್ಲ ಎಂದು ಸ್ಪಷ್ಟಪಡಿಸಿದೆ. ಮೂಲಗಳ ಪ್ರಕಾರ, ಈಗಾಗಲೇ ಒಂದು ಸುತ್ತಿನ ತನಿಖೆ ಮುಗಿಸಿರುವ ಸಿಬಿಐ, ಸದ್ಯದಲ್ಲೇ ಎರಡನೆಯ ಸುತ್ತಿನ ತನಿಖೆ ಪ್ರಾರಂಭಿಸಲಿದೆ ಎಂದು ಹೇಳಲಾಗುತ್ತಿದೆ.

    ‘ಲಕ್ಷ್ಮೀ ಬಾಂಬ್​’ ಟ್ರೇಲರ್​ ನೋಡಿ ಸೂಪರ್ಬ್​ ಎಂದ ಆಮೀರ್​ ಖಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts