ಬೆಂಗಳೂರು: ಐಪಿಎಲ್-17ರಲ್ಲಿ ಬಹುತೇಕ ನಿರ್ಗಮನ ಬಾಗಿಲಿನತ್ತ ತೆರಳಿದ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಆರ್ಸಿಬಿ ತಂಡದ ಪ್ಲೇಆ್ ಆಸೆಗೆ ಮರುಜೀವ ಬಂದಿದೆ. ಟೂರ್ನಿಯ ಉಳಿದ 3 ಲೀಗ್ ಪಂದ್ಯಗಳಲ್ಲೂ ಗೆಲುವಿನ ವಿಶ್ವಾಸವನ್ನು ನಾಯಕ ಫಾಫ್ ಡು ಪ್ಲೆಸಿಸ್ ವ್ಯಕ್ತಪಡಿಸಿದ್ದಾರೆ.
“ಗುಜರಾತ್ ಎದುರು ನಮ್ಮ ನಿರ್ವಹಣೆ ಅಮೋವಾಗಿತ್ತು. ಇಂಥ ಗೆಲುವು ತಂಡದ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಇದೇ ಶೈಲಿಯ ಆಟವನ್ನು ನಾವು ಮುಂದುವರಿಸಲು ಬಯಸಿದ್ದೇವೆ’ ಎಂದು ಪ್ಲೆಸಿಸ್ ಗುಜರಾತ್ ಟೈಟಾನ್ಸ್ ವಿರುದ್ಧದ 4 ವಿಕೆಟ್ ಗೆಲುವಿನ ಬಳಿಕ ಹೇಳಿದ್ದಾರೆ.
ಗುಜರಾತ್ ತಂಡವನ್ನು 147 ರನ್ಗಳಿಗೆ ನಿಯಂತ್ರಿಸಿದ ಆರ್ಸಿಬಿ, 13.4 ಓವರ್ಗಳಲ್ಲೇ 6 ವಿಕೆಟ್ಗೆ 152 ರನ್ ಗಳಿಸಿ ಜಯಭೇರಿ ಬಾರಿಸಿತು. ಪ್ಲೆಸಿಸ್ (64) ಮತ್ತು ವಿರಾಟ್ ಕೊಹ್ಲಿ (42) ಸ್ಫೋಟಕ ಆರಂಭ ಒದಗಿಸಿದರು. ಇದರಿಂದ ಮಧ್ಯಮ ಕ್ರಮಾಂಕಕ್ಕೆ ಜೋಶ್ ಲಿಟಲ್ (45ಕ್ಕೆ 4) ನೀಡಿದ ಹೊಡೆತವೂ ಆರ್ಸಿಬಿ ಗೆಲುವಿಗೆ ಅಡ್ಡಿಯಾಗಲಿಲ್ಲ.
“ಬ್ಯಾಟಿಂಗ್ನಲ್ಲಿ ನಮ್ಮ ನಿರ್ವಹಣೆ ಅತ್ಯುತ್ತಮವಾಗಿರಲಿಲ್ಲ. ಆದರೆ ಬೌಲಿಂಗ್ ನಿರ್ವಹಣೆ ಖುಷಿ ನೀಡಿದೆ. ಸತತ 3 ಗೆಲುವಿನೊಂದಿಗೆ ಪುಟಿದೆದ್ದಿರುವುದು ನಮ್ಮ ಪರಿಶ್ರಮಕ್ಕೆ ಸಿಕ್ಕ ಲವಾಗಿದೆ’ ಎಂದು ಪ್ಲೆಸಿಸ್ ಹೇಳಿದ್ದಾರೆ. ಪ್ಲೆಸಿಸ್ 18 ಎಸೆತಗಳಲ್ಲೇ ಅರ್ಧಶತಕ ಬಾರಿಸಿ ಆರ್ಸಿಬಿ ಪರ 2ನೇ ಅತಿವೇಗದ ಸಾಧಕ ಎನಿಸಿದರು. ಕ್ರಿಸ್ ಗೇಲ್ 17 ಎಸೆತಗಳಲ್ಲೇ ಅರ್ಧಶತಕ ಬಾರಿಸಿದ್ದು ಅಗ್ರಸ್ಥಾನದಲ್ಲಿದೆ.
ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಟೀಕಿಸಿದ್ದ ರೋಹಿತ್ ಶರ್ಮ ಅದೇ ಪಾತ್ರದಲ್ಲಿ ಕಣಕ್ಕಿಳಿಯಲು ಕಾರಣ ಹೀಗಿದೆ…