ಗದಗ: ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್ ಒಂದು ಪಲ್ಟಿಯಾಗಿ ಸಂಪೂರ್ಣ ಅಡಿಮೇಲಾದ ಭಯಾನಕ ಅಪಘಾತವೊಂದು ಸಂಭವಿಸಿದೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ.
ಈ ಭೀಕರ ಅಪಘಾತಕ್ಕೆ ಒಳಗಾಗಿದ್ದು ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಇಳಕಲ್ ಮಾರ್ಗದ ಬಸ್. ಅಪಘಾತ ಸಂಭವಿಸುವ ಸಂದರ್ಭ ಬಸ್ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರಿದ್ದರು. ಆದರೆ ಬಸ್ ಪಲ್ಟಿಯಾಗಿ ಪೂರ್ತಿ ಅಡಿಮೇಲಾದರೂ ಬಸ್ನೊಳಗಿದ್ದ ಅಷ್ಟೂ ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಮೂರು ದಿನ ಮನೆಯೊಳಗೇ ಇತ್ತು ಕಾಳಿಂಗ ಸರ್ಪ!; ಬರೋಬ್ಬರಿ 7 ಅಡಿ ಉದ್ದದ ಉರಗ..
ಪಲ್ಟಿಯಾದ ಬಸ್ನಿಂದ ಪ್ರಯಾಣಿಕರು ಗಾಜು ಒಡೆದು ಹೊರಗೆ ಬಂದಿದ್ದು, ಗಾಯಗೊಂಡವರನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದ್ದು, ಪ್ರಕರಣ ದಾಖಲಾಗಿದೆ.
ಜಾದೂಗಾರನಿಗೇ ಟೋಪಿ: ಉದಯ್ ಜಾದೂಗಾರ್ ಸಂಸ್ಥೆಗೆ ವೈದ್ಯನ ಸೋಗಲ್ಲಿ ಬಂದ, ಬಿಟ್ಟಿಯಾಗಿ ಮ್ಯಾಜಿಕ್ ಸಾಮಗ್ರಿ ಒಯ್ದ