ಬೆಂಗಳೂರು: ತೆಲುಗಿನ ಜನಪ್ರಿಯ ನಟ ಮಹೇಶ್ ಬಾಬು ಗೊತ್ತು. ಆದರೆ, ಕನ್ನಡದಲ್ಲೊಬ್ಬ ಮಹೇಶ್ ಬಾಬು ಇದ್ದಾರೆ ಗೊತ್ತಾ? ಗೊತ್ತಿರಲಿಕ್ಕಿಲ್ಲ. ಏಕೆಂದರೆ, ಈ ಮಹೇಶ್ ಬಾಬು ಈಗಷ್ಟೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ಮೊದಲ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಅಂದಹಾಗೆ, ಅವರ ಮೊದಲ ಚಿತ್ರ ಯಾವುದು ಗೊತ್ತಾ? ‘ಬುದ್ಧ’.
ಇದನ್ನೂ ಓದಿ: ಒಳ್ಳೆಯವನೂ ಅಲ್ಲ, ಕೆಟ್ಟವನೂ ಅಲ್ಲ ಈ ವಾಮನ … ಚಿತ್ರೀಕರಣ ಮುಕ್ತಾಯ
ವತ೯ನ್ ಪಿಕ್ಚರ್ಸ್ ಲಾಂಛನದಲ್ಲಿ ಸುರೇಶ್ ಭಾರದ್ವಾಜ್ ಕನಕಪುರ ನಿರ್ಮಿಸುತ್ತಿರುವ ‘ಬುದ್ಧ’ ಚಿತ್ರವನ್ನು ರಾಮ್ ಪೆರಿಯಸಾಮಿ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಇಂದು ಪ್ರೇಮಿಗಳ ದಿನದ ಅಂಗವಾಗಿ ಬಿಡುಗಡೆಯಾಗಿದೆ.
‘ಬುದ್ಧ’ ಚಿತ್ರಕ್ಕೆ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಸದ್ಯದಲ್ಲೇ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಕಾಶಿಯಲ್ಲಿ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಮಾಡುವ ಯೋಚೆನ ಚಿತ್ರ ತಂಡಕ್ಕಿದೆ.
ಈ ಚಿತ್ರದ ಕುರಿತು ಮಾತನಾಡುವ ಮಹೇಶ್ ಬಾಬು, ‘ಇದೊಂದು ವಿಭಿನ್ನ ಕಥಾಹಂದರ ಇರುವ ಚಿತ್ರ. ಎಲ್ಲಾ ಚಿತ್ರಗಳಲ್ಲೂ ಕಳೆದು ಹೋದವರನ್ನು ನಾಯಕ ಹುಡುಕಿ ಕೊಡುತ್ತಾನೆ. ಈ ಚಿತ್ರದ ಕಥೆಯಲ್ಲಿ ನಾಯಕನೇ ಕಳೆದು ಹೋಗಿರುತ್ತಾನೆ. ಅವನನ್ನು ಯಾರು ಹುಡುಕುತ್ತಾರೆ ಎಂಬುದೇ ಚಿತ್ರದ ಕಥೆ ಎನ್ನುತ್ತಾರೆ.
ಇದನ್ನೂ ಓದಿ: ‘ಭೀಮ’ನಿಗೆ ನಾಯಕಿ ಫಿಕ್ಸ್; ರಂಗಭೂಮಿಯಿಂದ ಚಿತ್ರರಂಗದತ್ತ ಅಶ್ವಿನಿ
‘ಬುದ್ಧ’ ಚಿತ್ರದಲ್ಲಿ ಐದು ಹಾಡುಗಳಿದ್ದು, ಒಂದನ್ನು ವಿ. ನಾಗೇಂದ್ರ ಪ್ರಸಾದ್ ಬರೆದರೆ, ಉಳಿದ ನಾಲ್ಕು ಹಾಡುಗಳನ್ನು ಚೇತನ್ ಕುಮಾರ್ ಬರೆಯತ್ತಿದ್ದಾರೆ.ರಾಘವೇಂದ್ರ ಅವರ ಸಂಗೀತ ಮತ್ತು ನಾಗ ಶೆಟ್ಟಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಹೇಶ್ ಬಾಬುಗೆ ನಾಯಕಿಯಾಗಿ ವಿದ್ಯಾ ರಾಜ್ ಇದ್ದು, ಮಿಕ್ಕಂತೆ ತಬಲ ನಾಣಿ, ‘ಸಿದ್ಲಿಂಗು’ ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಹರಾಜಿನಲ್ಲಿ ‘ಕಡಲ ತೀರದ ಭಾರ್ಗವ’ ಚಿತ್ರದ ಮೊದಲ ಟಿಕೆಟ್ ಮಾರಾಟ; ಬೆಲೆ ಎಷ್ಟು ಗೊತ್ತಾ?