More

    ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬ್ರಹ್ಮೋತ್ಸವ

    ಮೈಸೂರು: ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 25ನೇ ವಾರ್ಷಿಕೋತ್ಸವ ಹಾಗೂ ಬ್ರಹ್ಮೋತ್ಸವದ ಪ್ರಯುಕ್ತ ಗುರುವಾರ ನಾನಾ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

    ಮುಂಜಾನೆಯಿಂದಲೇ ಹೋಮ-ಹವನ ನಡೆದವು. ನಂತರ ವಿವಿಧ ನದಿಗಳಿಂದ ತರಲಾದ ಜಲದಿಂದ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅಭಿಷೇಕ ನೆರವೇರಿಸಲಾಯಿತು. ಕ್ಷೀರಾಭಿಷೇಕ ಮಾಡಿದ ಗಣಪತಿ ಸಚ್ಚಿದಾನಂದ ಶ್ರೀಗಳು ಮಂಗಳಾರತಿ ಮಾಡಿದರು. ನಂತರ ಕಾರ್ಯ ಸಿದ್ಧಿ ಹನುಮಾನ್ ಮಂದಿರದ ಮುಂಭಾಗ ಸ್ಥಾಪಿಸಿರುವ ಸ್ವಾಮಿಗೆ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅರ್ಚನೆ ಮತ್ತು ಪೂಜೆ ನೆರವೇರಿಸಿದರು. ಕಿರಿಯ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವಾದರು.

    ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಬ್ರಹ್ಮೋತ್ಸವ

    ಇದೇ ಸಂದರ್ಭದಲ್ಲಿ ಪ್ರವಚನ ನೀಡಿದ ಪ್ರವಚನಕಾರ ಅರಳು ಮಲ್ಲಿಗೆ ಪಾರ್ಥಸಾರಥಿ ಅವರು, ಕಲಿಯುಗದಲ್ಲಿ ಆ ವೆಂಕಟೇಶ್ವರನ ಸ್ಮರಣೆಯೊಂದೇ ನಮಗೆಲ್ಲರಿಗೂ ಆಸರೆ. ನಾವೆಲ್ಲರೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಪಾಪ ಕಾರ್ಯಗಳನ್ನು ಮಾಡಿರುತ್ತೇವೆ. ಹಾಗಾಗಿಯೇ ಇಂದು ತೊಂದರೆ, ಸಂಕಟ ಅನುಭವಿಸುತ್ತಿದ್ದೇವೆ. ಈ ಪಾಪಗಳು ಹೋಗಬೇಕಾದರೆ ವೆಂಕಟರಮಣನಿಂದ ಮಾತ್ರ ಸಾಧ್ಯ ಎಂದರು.

    ಪರಮಾತ್ಮನ ಸ್ಮರಣೆ ಮಾಡಬೇಕು. ದುರ್ಜನರ ಸಂಘ ಬಿಡಬೇಕು. ಕೆಟ್ಟತನ ಬಿಟ್ಟು ಸತ್ಸಂಗ ಹಿಡಿಯಬೇಕು. ಬೇರೆಯವರ ಬಗ್ಗೆ ಅನವಶ್ಯಕವಾಗಿ ಚಿಂತೆ ಮಾಡದೆ ಸದಾ ಪರಮಾತ್ಮನ ಧ್ಯಾನ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಟಿವಿ, ಸಾಮಾಜಿಕ ಜಾಲತಾಣ, ಪತ್ರಿಕೆಗಳಿಂದಾಗಿ ಬರೀ ಕೆಟ್ಟದ್ದನ್ನೇ ಕೇಳಿ ಎಲ್ಲರ ಮನಸ್ಸು ವಿಕಾರಗೊಂಡಿದೆ. ಎಲ್ಲರೂ ಅಸೂಯಪರರಾಗಿಬಿಟ್ಟಿದ್ದಾರೆ. ಎಲ್ಲೂ ಶಾಂತಿ, ನೆಮ್ಮದಿ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಇಂದು ವ್ಯಾಸ ಹುಣ್ಣಿಮೆ. ಅತ್ಯಂತ ಪವಿತ್ರವಾದ ದಿನ. ಪವಿತ್ರ ಭಾಗವತ ಗ್ರಂಥವನ್ನು ವ್ಯಾಸರು ಕೊಟ್ಟಿದ್ದಾರೆ. ಇದರ ಪ್ರತಿ ಪದದಲ್ಲೂ ಪರಮಾತ್ಮನಿದ್ದಾನೆ. ಇಂತಹ ಭಾಗವತವನ್ನು ಶ್ರೀಗಳು ಮತ್ತು ಹಿರಿಯ ಶ್ರೀಗಳು ನಿರರ್ಗಳವಾಗಿ ಹೇಳುತ್ತಾರೆ. ಅದನ್ನು ಕೇಳುವುದೇ ಪುಣ್ಯ ಎಂದು ತಿಳಿಸಿದರು.

    ಗಣಪತಿ ಶ್ರೀಗಳು ಇಡೀ ಪ್ರಪಂಚ ಸುತ್ತಿದ್ದಾರೆ. ಎಲ್ಲ ಕಡೆ ನಮ್ಮ ಸಂಸ್ಕೃತಿ, ಭಗವದ್ಗೀತೆಯನ್ನು ಪ್ರಚಾರ ಮಾಡಿದ್ದಾರೆ. ಅಮೆರಿಕದ ಡಲ್ಲಾಸ್‌ನಲ್ಲಿ 10 ಸಾವಿರ ಜನರು ಒಂದೇ ವೇದಿಕೆಯಲ್ಲಿ ಭಗವದ್ಗೀತಾ ಪಠಣ ಮಾಡಿದ್ದು ಇತಿಹಾಸ ಸೃಷ್ಟಿಸಿದೆ. ಶ್ರೀಗಳು ಜಗತ್ತಿನಾದ್ಯಂತ ಆಶ್ರಮಗಳನ್ನು, ದೇವಾಲಯಗಳನ್ನು ನಿರ್ಮಿಸಿದ್ದಾರೆ. ಶ್ರೀ ಪ್ರಭುಪಾದರಂತೆ ದೇಶ ಪರ್ಯಟನೆ ಮಾಡುತ್ತಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts