ಮುಂಬೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಚಿತ್ರದ ಬಿಡುಗಡೆಯ ದಿನಾಂಕ ಸೋಮವಾರವಷ್ಟೇ ಹೊರಬಿದ್ದಿದದೆ. ರಾಮ್ಚರಣ್ ತೇಜ ಮತ್ತು ಜ್ಯೂನಿಯರ್ ಎನ್ಟಿಆರ್ ಅವರ ಹೊಸ ಪೋಸ್ಟರ್ ಬಿಡುಗಡೆ ಮಾಡಿರುವ ರಾಜಮೌಳಿ, ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.
‘ಆರ್ಆರ್ಆರ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇನ್ನೊಂದು ಕಡೆ, ರಾಜಮೌಳಿ ನಡೆಯ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಬಾಲಿವುಡ್ನ ಜನಪ್ರಿಯ ನಿರ್ಮಾಪಕ ಬೋನಿ ಕಪೂರ್, ರಾಜಮೌಳಿ ಮಾಡಿದ್ದು ಸರಿಯಲ್ಲ, ಅದು ಅನೈತಿಕ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೊನೆಗೂ ಜೈಲಿನಿಂದ ಹೊರಬಂದ ರಾಗಿಣಿಯ ಮೊದಲ ಪ್ರತಿಕ್ರಿಯೆ ಹೀಗಿತ್ತು..!
ರಾಜಮೌಳಿ ಅವರು ‘ಆರ್ಆರ್ಆರ್’ ಬಿಡುಗಡೆ ದಿನ ಘೋಷಿಸಿದ್ದಿಕ್ಕೆ ಬೋನಿ ಕಪೂರ್ ಯಾಕೆ ಸಿಟ್ಟಾಗಬೇಕು ಎಂಬ ಪ್ರಶ್ನೆ ಬರುವುದು ಸಹಜ. ಟ್ವಿಸ್ಟ್ ಇರೋದೇ ಇಲ್ಲ. ವಿಷಯವೇನೆಂದರೆ, ಆರು ತಿಂಗಳ ಹಿಂದೆಯೇ ಬೋನಿ ಕಪೂರ್ ತಮ್ಮ ನಿರ್ಮಾಣದ ‘ಮೈದಾನ್’ ಎಂಬ ಚಿತ್ರವನ್ನು ಅಕ್ಟೋಬರ್ 15ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಈಗ ಅದಕ್ಕೂ ಎರಡು ದಿನಗಳ ಮುಂಚೆ ರಾಜಮೌಳಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಮಸ್ಯೆ ಏನೆಂದರೆ, ಎರಡೂ ಚಿತ್ರಗಳಲ್ಲಿ ಅಜಯ್ ದೇವಗನ್ ಅಭಿನಯಿಸುತ್ತಿದ್ದಾರೆ.
‘ಆರ್ಆರ್ಆರ್’ ಚಿತ್ರದಲ್ಲಿ ಅಜಯ್ ದೇವಗನ್ ಕ್ರಾಂತಿಕಾರಿಯ ಪಾತ್ರ ಮಾಡಿದರೆ, ‘ಮೈದಾನ್’ ಚಿತ್ರದಲ್ಲಿ ಅಜಯ್ ದೇವಗನ್ ಖ್ಯಾತ ಫುಟ್ಬಾಲ್ ಆಟಗಾರ ಸಯ್ಯದ್ ಅಬ್ದುಲ್ ರಹೀಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಎರಡು ಚಿತ್ರಗಳು, ಎರಡು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಒಬ್ಬ ಸ್ಟಾರ್ ನಟನ ಎರಡು ದೊಡ್ಡ ಚಿತ್ರಗಳು ಹೀಗೆ ಬಿಡುಗಡೆಯಾದರೆ, ಕಥೆಯೇನು ಎಂಬುದು ಬೋನಿ ಕಪೂರ್ ಅಳಲು.
ಇದನ್ನೂ ಓದಿ: ದೇವರಾದ ಪುನೀತ್; ಓ ಮೈ ಕಡುವುಳೇ ಚಿತ್ರದ ರೀಮೇಕ್ನಲ್ಲಿ ನಟನೆ
ಮೂಲಗಳ ಪ್ರಕಾರ, ಹೀಗಾಗಬಹುದು ಎಂದು ಅಜಯ್ಗೆ ಗೊತ್ತಿತ್ತಂತೆ. ಅದೇ ಕಾರಣಕ್ಕೆ ಅವರು ರಾಜಮೌಳಿಗೆ ಚಿತ್ರದ ಬಿಡುಗಡೆ ಘೋಷಣೆ ಮಾಡುವುದಕ್ಕಿಂತ ಮುನ್ನ ಒಮ್ಮೆ ಬೋನಿ ಕಪೂರ್ ಅವರ ಜತೆಗೆ ಮಾತನಾಡಿ ಎಂದು ಹೇಳಿದ್ದರಂತೆ. ಆದರೆ, ಬೋನಿ ಜತೆಗೆ ಮಾತನಾಡುವುದಕ್ಕಿಂತ ಮುಂಚೆಯೇ ರಾಜಮೌಳಿ, ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ಬೋನಿ ಕಪೂರ್ ಬಹಳ ಅಪ್ಸೆಟ್ ಆಗಿದ್ದಾರಂತೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಿಜಕ್ಕೂ ಅಪ್ಸೆಟ್ ಆಗಿದ್ದೇನೆ. ಇದು ಅನೈತಿಕ. ನಮ್ಮ ಚಿತ್ರದ ಬಿಡುಗಡೆಯನ್ನು ಆರು ತಿಂಗಳ ಹಿಂದೆಯೇ ಘೋಷಿಸಿದ್ದೆ. ಈಗ ರಾಜಮೌಳಿ ಅದೇ ಸಮಯದಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಲಾಕ್ಡೌನ್ನಿಂದ ಚಿತ್ರರಂಗ ತತ್ತರಿಸಿದೆ. ಇಂಥ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮಾಡಬೇಕು. ಆದರೆ, ರಾಜಮೌಳಿ ನೊಡಿದರೆ ಹೀಗೆ ಮಾಡಿದ್ದಾರೆ’ ಎಂದು ಬೇಸರಿಸಿಕೊಂಡಿದ್ದಾರೆ.
‘ಆರ್ಆರ್ಆರ್’ ಚಿತ್ರದಲ್ಲಿ ರಾಮ್ಚರಣ್ ತೇಜ, ಜ್ಯೂನಿಯರ್ ಎನ್ಟಿಆರ್, ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯಾ ಸರಣ್ ಸೇರಿ ಹಲವರು ನಟಿಸಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ.
‘ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ, ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ’