More

    ಎಂದಿಗೂ ಮಾಜಿ ಆಗಲ್ಲ ಅಂತ ಮನವರಿಕೆಯಾಗಿದೆ: ಪುತ್ರಿ ಜಾಹ್ನವಿ ಬಾಯ್​ಫ್ರೆಂಡ್​ ಬಗ್ಗೆ ಬೋನಿ ಕಪೂರ್​ ಮಾತು

    ಮುಂಬೈ: ಬಾಲಿವುಡ್​ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಅವರು ತಮ್ಮ ಪುತ್ರಿ ಹಾಗೂ ನಟಿ ಜಾಹ್ನವಿ ಕಪೂರ್ ಅವರ​ ಬಾಯ್​ಫ್ರೆಂಡ್​ ಶಿಖರ್​ ಪಹರಿಯಾ ಜತೆಗಿನ ತಮ್ಮ ಒಡೆನಾಟದ ಬಗ್ಗೆ ಮಾತನಾಡಿದ್ದಾರೆ. ಶಿಖರ್​ ಅವರನ್ನು ನಮ್ಮ ಜೀವನದಲ್ಲಿ ಹೊಂದಿರುವುದು ನಮಗೆ ದೊರೆತ ಆಶೀರ್ವಾದ ಎಂದಿರುವ ಬೋನಿ ಕಪೂರ್ ಮಗಳು ಮತ್ತು ಶಿಖರ್ ನಡುವಿನ ಪ್ರೇಮ​ ಸಂಬಂಧಕ್ಕೆ ಗ್ರಿನ್​ ಸಿಗ್ನಲ್​ ನೀಡಿದ್ದಾರೆ.

    ಜೂಮ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಬೋನಿ ಕಪೂರ್​, ನಾನು ಕೂಡ ಆತನನ್ನು (ಶಿಖರ್​) ಪ್ರೀತಿಸುತ್ತೇನೆ. ಕೆಲವು ವರ್ಷಗಳ ಹಿಂದೆ ಜಾಹ್ನವಿ ಶಿಖರ್​ನನ್ನು ನೋಡಿರಲಿಲ್ಲ ಆದರೆ, ಆ ಸಂದರ್ಭದಲ್ಲೂ ನನಗೆ ಆತನ ಪರಿಚಯವಿತ್ತು. ಶಿಖರ್​ ಗುಣವನ್ನು ನೋಡಿದರೆ, ಎಂದಿಗೂ ಆತ ಜಾಹ್ನವಿಗೆ ಮಾಜಿ ಆಗುವುದಿಲ್ಲ ಎಂದು ನನಗೆ ಮನವರಿಕೆಯಾಗಿದೆ ಎಂದು ಬೋನಿ ಕಪೂರ್​ ತಿಳಿಸಿದ್ದಾರೆ.

    ಶಿಖರ್​ ಯಾವಾಗಲೂ ನಮ್ಮ ಸುತ್ತಲೂ ಇರುತ್ತಾನೆ. ಆತ ನನ್ನೊಂದಿಗಿರಲಿ, ಜಾಹ್ನವಿ ಜತೆಯಿರಲಿ ಅಥವಾ ಅರ್ಜುನ್‌ ಜತೆ ಇರಲಿ, ಎಲ್ಲರೊಂದಿಗೆ ಸ್ನೇಹಪರನಾಗಿರುತ್ತಾನೆ. ಆದ್ದರಿಂದ ನಮ್ಮ ಜೀವನದಲ್ಲಿ ಅವರಂತಹ ವ್ಯಕ್ತಿಯನ್ನು ಹೊಂದಲು ನಾವು ಆಶೀರ್ವದಿಸಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದು ಬೋನಿ ಕಪೂರ್​ ತಿಳಿಸಿದರು.

    ಅಂದಹಾಗೆ ಜಾಹ್ನವಿ ಅವರು ಶಿಖರ್ ಜೊತೆಗಿನ ಸಂಬಂಧವನ್ನು ಅಧಿಕೃತವಾಗಿ ದೃಢಪಡಿಸಿಲ್ಲ, ಆದರೆ ಅವರು ಬಹಿರಂಗವಾಗಿ ಊಟ ಮತ್ತು ರಾತ್ರಿಯ ವಿಹಾರ ಅಂತಾ ಡೇಟಿಂಗ್​ನಲ್ಲಿ ಮುಳುಗಿರುವುದು ಜಗಜ್ಜಾಹೀರಾಗಿದೆ. ಇತ್ತೀಚೆಗಷ್ಟೇ ಒಟ್ಟಿಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಅಲ್ಲದೆ, ಕಳೆದ ತಿಂಗಳು ತನ್ನ 27ನೇ ಹುಟ್ಟುಹಬ್ಬದಂದು, ಜಾಹ್ನವಿ, ಶಿಖರ್ ಜತೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

    ಅಂದಹಾಗೆ ಶಿಖರ್ ಪಹಾರಿಯಾ ಅವರು ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಬೋನಿ ಕಪೂರ್ ಅವರು ಅಜಯ್ ದೇವಗನ್ ನಟನೆಯ ‘ಮೈದಾನ’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಫುಟ್‌ಬಾಲ್ ಮೂಲಕ ಭಾರತಕ್ಕೆ ಹೆಮ್ಮೆ ತಂದ ಸೈಯದ್ ಅಬ್ದುಲ್ ರಹೀಮ್ ಎಂಬ ಅಪರಿಚಿತ ನಾಯಕನ ಕುರಿತಾದ ಚಿತ್ರ ಕತೆಯನ್ನು ಹೊಂದಿದೆ. ಈ ಸಿನಿಮಾವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ್ದಾರೆ ಮತ್ತು ಪ್ರಿಯಾಮಣಿ, ಗಜರಾಜ್ ರಾವ್, ರುದ್ರನೀಲ್ ಘೋಷ್ ಪ್ರಮುಖ ಪಾತ್ರಗಳಲ್ಲಿದ್ದಾರೆ. (ಏಜೆನ್ಸೀಸ್​)

    ಟೈಟಾನಿಕ್​​ ದುರಂತ: ನಾಯಕಿಯ ಜೀವ ಉಳಿಸಿದ ಮರದ ಹಲಗೆ ಮಾರಾಟವಾದ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಟೀ ಜತೆ ಈ ಹಣ್ಣನ್ನು ಸೇರಿಸಿ ಸೇವಿಸಿದ್ರೆ ಹೃದಯ ಸಮಸ್ಯೆ, ಕ್ಯಾನ್ಸರ್​ ಎಂದಿಗೂ ನಿಮ್ಮ ಬಳಿ ಸುಳಿಯಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts