ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಬಂಧನಕ್ಕೊಳಪಟ್ಟು ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಸ್ಯಾಂಡಲ್ವುಡ್ನ ಮಾದಕ ನಟಿ ರಾಗಿಣಿ ದ್ವಿವೇದಿ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಸಿಗದೇ ಮೂರ್ನಾಲ್ಕು ದಿನ ಜೈಲಲ್ಲೇ ಒದ್ದಾಡಿದ್ದ ರಾಗಿಣಿ ಕೊನೆಗೂ ಜೈಲಿನಿಂದ ಹೊರಬಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಪಾಲಕರು ಹರಕೆಯಂತೆ ದೇವರಿಗೆ ಕಾಣಿಕೆ ಒಪ್ಪಿಸಿದರು. ರಾಗಿಣಿಯು ಸಹ ದೇವರಿಗೆ ತಲೆಬಾಗಿ ನಮಸ್ಕರಿಸಿದರು.
ಇದಾದ ಬಳಿಕ ಮಾತನಾಡಿದ ರಾಗಿಣಿ, ಸತ್ಯಮೇವ ಜಯತೆ ಎಂದು ಹೇಳಲು ಇಷ್ಟಪಡುತ್ತೇನೆ. ಸತ್ಯಕ್ಕೆ ಯಾವತ್ತು ಜಯ ಸಿಗುತ್ತದೆ. ನನಗೆ ಒಳ್ಳೆಯದು ಬಯಸಿದ ಎಲ್ಲರಿಗೂ ಧನ್ಯವಾದ ತಿಳಿಸಲು ಬಯಸುತ್ತೇನೆ. ಸದ್ಯ ಕುಟುಂಬದ ಜತೆ ಸಮಯ ಕಳೆಯುತ್ತೇನೆ. ಮತ್ತೆ ನಿಮ್ಮೊಂದಿಗೆ ಮಾತನಾಡುತ್ತೇನೆಂದು ಹೇಳಿ ಅಲ್ಲಿಂದ ಮನೆಗೆ ತೆರಳಿದರು.
2020ರ ಸೆಪ್ಟೆಂಬರ್ 14ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರಾಗಿಣಿ, ಜಾಮೀನು ಕೋರಿ ಸುಪ್ರೀಂಕೋರ್ಟ್ನ ಮೊರೆಹೋಗಿದ್ದರು. ಸುಪ್ರೀಂ ಕೋರ್ಟ್ ಗುರುವಾರ ರಾಗಿಣಿಗೆ ಜಾಮೀನು ಮಂಜೂರು ಮಾಡಿತ್ತು. ನಾಲ್ಕೂವರೆ ತಿಂಗಳ ಬಳಿಕ ಜೈಲಿನಿಂದ ಬಿಡುಗಡೆ ಆಗುವ ಖುಷಿಯಲ್ಲಿದ್ದ ರಾಗಿಣಿಗೆ ಮತ್ತೊಂದು ಆಘಾತ ಎದುರಾಗಿತ್ತು. ಸುಪ್ರೀಂಕೋರ್ಟ್ನ ಆದೇಶ ಪ್ರತಿ ಎನ್ಡಿಪಿಎಸ್ ನ್ಯಾಯಾಲಯಕ್ಕೆ ತಲುಪದಿದ್ದರಿಂದ ರಾಗಿಣಿ ಬಿಡುಗಡೆಗೆ ವಿಳಂಬವಾಗಿತ್ತು. (ದಿಗ್ವಿಜಯ ನ್ಯೂಸ್)
ಮಹಿಳಾ ಎಸ್ಐ ಆತ್ಮಹತ್ಯೆ ಹಿಂದಿನ ಕರಾಳ ಸತ್ಯ ಬಹಿರಂಗ: ಪೊಲೀಸ್ ಟ್ರೈನರ್ ವಿರುದ್ಧ ದಾಖಲಾಯ್ತು ಎಫ್ಐಆರ್!