ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಹಾಯಕ ಹಾಗೂ ಮುಂಬೈ ಕ್ರೈಂ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಯಾಗಿದ್ದ ರಿಯಾಜ್ ಖಾಜಿಯನ್ನು ಭಾನುವಾರ ಎನ್ಐಎ ಬಂಧಿಸಿದೆ. ಮುಕೇಶ್ ಅಂಬಾನಿ ಮನೆ ಸ್ಪೋಟಕ ಇರಿಸಿದ್ದ ಕಾರ್ ನಂಬರ್ ಪ್ಲೇಟ್ ಬದಲಾವಣೆ ಮಾಡಿದ್ದ ಆರೋಪ ಹಾಗೂ ಸಾಕ್ಷ್ಯ ನಾಶದ ಆರೋಪವನ್ನು ಖಾಜಿ ಮೇಲೆ ಹೊರಿಸಲಾಗಿದೆ. ಸಚಿನ್ ವಾಜೆ ಅವರೇ ತನಗೆ ಎರಡು ಕಾರ್ಗಳ ನಂಬರ್ ಪ್ಲೇಟ್ ಬದಲಾವಣೆ ಮಾಡಲು ಹೇಳಿದ್ದರು ಎಂಬುದಾಗಿ ರಿಯಾಜ್ ಬಾಯ್ಬಿಟ್ಟಿದ್ದಾನೆ.
ಇದನ್ನೂ ಓದಿ: ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್ ಅನುಸರಿಸಿ…
ಫೆಬ್ರವರಿ 25 ರಂದು ಸ್ಕಾರ್ಪಿಯೋ ವಾಹನ ಒಂದು ಸ್ಪೋಟಕ ಹಾಗೂ ಬೆದರಿಕೆ ಪತ್ರ ಒಳಗೊಂಡು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಾದ ಅಂಟಿಲಿಯಾ ಬಳಿ ಪತ್ತೆಯಾಗಿತ್ತು. ಪತ್ತೆಯಾದ ಸ್ಕಾರ್ಪಿಯೋ ವಾಹನ ತನ್ನದು ಎಂದು ಹೇಳಿಕೊಂಡು ಮನ್ಸೂಕ್ ಹಿರೇನ್ ಎನ್ನುವ ವ್ಯಕ್ತಿ ಪೊಲೀಸ್ ಮುಂದೆ ಹೊರಟಿದ್ದರು. ಆದರೆ ಮಾರ್ಚ್ 5 ರಂದು ಮನ್ಸೂಕ್ ಹಿರೇನ್ ಏಕಾಏಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಎನ್ಕೌಂಟ್ರ್ ಪರಿಣಿತಿಯ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್ಐಟ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್).
ಮನ್ಸೂಕ್ ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಿದ್ದೇವೆ ಎಂದ ಮುಂಬೈ ಪೊಲೀಸ್: ಸಂಚು ಮಾಡಿದ್ದು ಸಚಿನ್ ವಾಜೆ?