More

    ಸಚಿನ್ ವಾಜೆ ಸಹಾಯಕನನ್ನು ಬಂಧಿಸಿದ ಎನ್​ಐಎ: ರಿಯಾಜ್ ಖಾಜಿ ಬಿಚ್ಚಿಟ್ಟ ಸ್ಪೋಟಕ ಸತ್ಯ

    ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆಯಾಗಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್​ ಸಿಕ್ಕಿದೆ.

    ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಸಹಾಯಕ ಹಾಗೂ ಮುಂಬೈ ಕ್ರೈಂ ಇಂಟಲಿಜೆನ್ಸ್ ಯುನಿಟ್ ಅಧಿಕಾರಿಯಾಗಿದ್ದ ರಿಯಾಜ್ ಖಾಜಿಯನ್ನು ಭಾನುವಾರ ಎನ್​ಐಎ ಬಂಧಿಸಿದೆ. ಮುಕೇಶ್ ಅಂಬಾನಿ ಮನೆ ಸ್ಪೋಟಕ ಇರಿಸಿದ್ದ ಕಾರ್​​ ನಂಬರ್ ಪ್ಲೇಟ್ ಬದಲಾವಣೆ ಮಾಡಿದ್ದ ಆರೋಪ ಹಾಗೂ ಸಾಕ್ಷ್ಯ ನಾಶದ ಆರೋಪವನ್ನು ಖಾಜಿ ಮೇಲೆ ಹೊರಿಸಲಾಗಿದೆ. ಸಚಿನ್ ವಾಜೆ ಅವರೇ ತನಗೆ ಎರಡು ಕಾರ್​​ಗಳ ನಂಬರ್​ ಪ್ಲೇಟ್ ಬದಲಾವಣೆ ಮಾಡಲು ಹೇಳಿದ್ದರು ಎಂಬುದಾಗಿ ರಿಯಾಜ್ ಬಾಯ್ಬಿಟ್ಟಿದ್ದಾನೆ.

    ಇದನ್ನೂ ಓದಿ: ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್​ ಅನುಸರಿಸಿ…

    ಫೆಬ್ರವರಿ 25 ರಂದು ಸ್ಕಾರ್ಪಿಯೋ ವಾಹನ ಒಂದು ಸ್ಪೋಟಕ ಹಾಗೂ ಬೆದರಿಕೆ ಪತ್ರ ಒಳಗೊಂಡು ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯಾದ ಅಂಟಿಲಿಯಾ ಬಳಿ ಪತ್ತೆಯಾಗಿತ್ತು. ಪತ್ತೆಯಾದ ಸ್ಕಾರ್ಪಿಯೋ ವಾಹನ ತನ್ನದು ಎಂದು ಹೇಳಿಕೊಂಡು ಮನ್ಸೂಕ್ ಹಿರೇನ್ ಎನ್ನುವ ವ್ಯಕ್ತಿ ಪೊಲೀಸ್​ ಮುಂದೆ ಹೊರಟಿದ್ದರು. ಆದರೆ ಮಾರ್ಚ್ 5 ರಂದು ಮನ್ಸೂಕ್ ಹಿರೇನ್ ಏಕಾಏಕಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.

    ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಎನ್​ಕೌಂಟ್​ರ್ ಪರಿಣಿತಿಯ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್​ಐಟ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್).

    ಮನ್ಸೂಕ್ ಹಿರೇನ್ ಕೊಲೆ ಪ್ರಕರಣವನ್ನು ಬಗೆಹರಿಸಿದ್ದೇವೆ ಎಂದ ಮುಂಬೈ ಪೊಲೀಸ್: ಸಂಚು ಮಾಡಿದ್ದು ಸಚಿನ್​ ವಾಜೆ?

    ವಾಜೆ ಅಕ್ರಮ ಬಯಲು: ಐಷಾರಾಮಿ ಹೋಟೆಲ್​ನಲ್ಲಿ ವಸೂಲಿ ದಂಧೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts