ಮುಂಬೈ: ದಕ್ಷಿಣ ಭಾರತದ ಸಿನಿಮಾಗಳ ಗೆಲುವು ಬಾಲಿವುಡ್ ಅನ್ನು ಕಂಗೆಡುವಂತೆ ಮಾಡಿರುವುದು ಅವರಲ್ಲಿ ಅಸುರಕ್ಷಿತ ಭಾವನೆ ಕಾಡುವಂತೆ ಮಾಡಿದೆ ಎಂದು ನಿದೇರ್ಶಕ ರಾಮ್ಗೋಪಾಲ್ ವರ್ಮಾ ಹೇಳಿದ್ದಾರೆ.
ಹಿಂದಿ ಭಾಷೆ ಕುರಿತ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ವಿವಾದಕ್ಕೆ ಗುರಿಯಾದ ಬಾಲಿವುಡ್ ನಟ ಅಜಯ್ ದೇವಗನ್ ನಂತರ ತಾವೇ ಟ್ವೀಟ್ ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ ಎಂದು ವಿವಾದಕ್ಕೆ ತೆರೆ ಎಳೆದಿದ್ದರು.
ಇದೀಗ ಈ ರೀತಿಯ ಭಾವನೆ ಬಾಲಿವುಡ್ ನಟರನ್ನು ಕಂಗೆಡುವಂತೆ ಮಾಡಿದೆ ಎಂದು ರಾಮ್ಗೋಪಾಲ್ ವರ್ಮಾ ಹೇಳಿದ್ದಾರೆ. ಇನ್ನು ಕೆಜಿಎಫ್ -2 ಭರ್ಜರಿ ಯಶಸ್ಸು ಬಾಲಿವುಡ್ ನಟರನ್ನು ಅಸುರಕ್ಷಿತ ಹಾಗೂ ಅಸೂಯೆ ಮೂಡಿಸಿದೆ ಎಂದು ಹೇಳಿಕೆ ನೀಡಿದ್ದರು.
ತಮ್ಮ ಸಿನಿಮಾ ಸೋಲುತ್ತಿದೆ ಎಂಬ ಭಯದಿಂದಲೇ ದಕ್ಷಿಣ ಭಾರತದ ಸಿನಿಮಾಗಳನ್ನು ಹಿಂದಿಯಲ್ಲಿ ಏಕೆ ಡಬ್ ಮಾಡುತ್ತೀರಿ ಎಂದು ಹೇಳುವ ಮೂಲಕ ತಮ್ಮ ಅಸುರಕ್ಷಿತ ಭಾವನೆಯನ್ನು ಹೊರಹಾಕಿದ್ದಾರೆ ಎಂದು ವರ್ಮಾ ಹೇಳಿಕೊಂಡಿದ್ದಾರೆ.
ಸದ್ಯ ಹಿಂದಿ ರಾಷ್ಟ್ರೀಯ ಭಾಷೆ ಕುರಿತು ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹಣಕ್ಕಾಗಿ ಸರ್ಕಾರಿ ಜಾಬ್ ಮಾರುವ ಗ್ಯಾಂಗ್ಗಳಿಗೆ ಗೃಹ ಸಚಿವರಿಂದ ಖಡಕ್ ಎಚ್ಚರಿಕೆ