ಶೆಡ್​ನಲ್ಲಿದ್ದ ಮೇಕೆ ಮರಿ ನುಂಗಿದ ಹೆಬ್ಬಾವು!

ಚಿಕ್ಕಮಗಳೂರು: ಶೆಡ್​ ನಲ್ಲಿದ್ದ ಮೇಕೆ ಮರಿಯನ್ನು ಹೆಬ್ಬಾವು ನುಂಗಿರುವ ಘಟನೆ ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ನಡೆದಿದೆ. ವೆಂಕಟಪ್ಪ ಎಂಬುವವರಿಗೆ ಸೇರಿದ ಶೆಡ್​​ನಲ್ಲಿ ನುಗ್ಗಿದ ಹೆಬ್ಬಾವು ಮರಿಯನ್ನು ನುಂಗಿ ಹಾಕಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್​ ನರೇಶ್​ ಮೇಕೆ ಮರಿಯನ್ನು ನುಂಗಿರುವ ಹೆಬ್ಬಾವನ್ನು ಸೆರೆ ಹಿಡಿದರು. ಮಾಲೀಕ ವೆಂಕಟಪ್ಪ ಎದುರಲ್ಲೇ ಹೆಬ್ಬಾವು ಶೆಡ್​ಗೆ ನುಗ್ಗಿದೆ. ಗಾಬರಿಯಾಗಿ ಹೆಬ್ಬಾವನ್ನು ಓಡಿಸುವ ಪ್ರಯತ್ನ ಮಾಡಿದರಾದರೂ ಜಗ್ಗದ ಹೆಬ್ಬಾವು ಅವರ ಕಣ್ಣಮುಂದೆಯೇ ಮೇಕೆ ಮರಿಯನ್ನು ನುಂಗಿಹಾಕಿದೆ. ಸದ್ಯ … Continue reading ಶೆಡ್​ನಲ್ಲಿದ್ದ ಮೇಕೆ ಮರಿ ನುಂಗಿದ ಹೆಬ್ಬಾವು!