ಚಿಕ್ಕಮಗಳೂರು: ಶೆಡ್ ನಲ್ಲಿದ್ದ ಮೇಕೆ ಮರಿಯನ್ನು ಹೆಬ್ಬಾವು ನುಂಗಿರುವ ಘಟನೆ ಚಿಕ್ಕಮಗಳೂರು ನಗರದ ಕಾಫಿ ಮಂಡಳಿ ಸಮೀಪ ನಡೆದಿದೆ.
ವೆಂಕಟಪ್ಪ ಎಂಬುವವರಿಗೆ ಸೇರಿದ ಶೆಡ್ನಲ್ಲಿ ನುಗ್ಗಿದ ಹೆಬ್ಬಾವು ಮರಿಯನ್ನು ನುಂಗಿ ಹಾಕಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಉರಗ ತಜ್ಞ ಸ್ನೇಕ್ ನರೇಶ್ ಮೇಕೆ ಮರಿಯನ್ನು ನುಂಗಿರುವ ಹೆಬ್ಬಾವನ್ನು ಸೆರೆ ಹಿಡಿದರು.
ಮಾಲೀಕ ವೆಂಕಟಪ್ಪ ಎದುರಲ್ಲೇ ಹೆಬ್ಬಾವು ಶೆಡ್ಗೆ ನುಗ್ಗಿದೆ. ಗಾಬರಿಯಾಗಿ ಹೆಬ್ಬಾವನ್ನು ಓಡಿಸುವ ಪ್ರಯತ್ನ ಮಾಡಿದರಾದರೂ ಜಗ್ಗದ ಹೆಬ್ಬಾವು ಅವರ ಕಣ್ಣಮುಂದೆಯೇ ಮೇಕೆ ಮರಿಯನ್ನು ನುಂಗಿಹಾಕಿದೆ.
ಸದ್ಯ ಹೆಬ್ಬಾವನ್ನು ಸೆರೆ ಹಿಡಿದು ಚುರ್ಚೆ ಗುಡ್ಡ ಅರಣ್ಯಕ್ಕೆ ಬಿಡಲಾಗಿದೆ.