ಬೆಂಗಳೂರು: ಲ್ಯಾಂಡಿಂಗ್ ಆಗುವ ಕೆಲವೇ ಹೊತ್ತಿನಲ್ಲಿ ವಿಮಾನದ ಟೈರ್ ಸ್ಫೋಟಗೊಂಡಿತ್ತಾದರೂ ಪೈಲೆಟ್ ವಿಮಾನವನ್ನು ಸುರಕ್ಷಿತವಾಗಿ ಇಳಿಸುವ ಮೂಲಕ ಮುಂದಾಗಬಹುದಾದ ಭಾರೀ ದುರಂತವೊಂದನ್ನು ತಪ್ಪಿಸಿದ್ದಾರೆ.
150 ಪ್ರಯಾಣಿಕರನ್ನು ಹೊತ್ತ ಥಾಯಿ ವಿಮಾನ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇನ್ನೇನು ಕೆಲವೇ ಹೊತ್ತಿನಲ್ಲಿ ಇಳಿಯಬೇಕಿತ್ತು. ಆಗಲೇ ಭಾರೀ ಅನಾಹುತವೇ ನಡೆದುಹೋಗಿದೆ. ಟೈರು ಸ್ಫೋಟಗೊಂಡು ವಿಮಾನದಲ್ಲಿದ್ದವರು ಆತಂಕದಲ್ಲಿದ್ದರು. ಪೈಲೆಟ್ ಹೆದರದೇ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.
ಏಪ್ರಿಲ್ 26 ರಂದು ಈ ಘಟನೆ ನಡೆದಿದ್ದು, ತಾಂತ್ರಿಕ ತಂಡ ವಿಮಾನದ ಚಕ್ರವನ್ನು ಸರಿಪಡಿಸಿದ್ದು, ಏಪ್ರಿಲ್ 28ಕ್ಕೆ ಬೆಂಗಳೂರಿನಿಂದ ಬ್ಯಾಂಕಾಕ್ಗೆ ಪ್ರಯಾಣ ಬೆಳೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೊಯಿಂಗ್ 787-8 ವಿಮಾನ ಏಪ್ರಿಲ್ 26ರಂದು ಬ್ಯಾಂಕಾಕ್ನಿಂದ ಹೊರಟು ಬೆಂಗಳೂರಿಗೆ ರಾತ್ರಿ 11.32ಕ್ಕೆ ಲ್ಯಾಂಡ್ ಆಗಿದೆ. ಈ ಸಮಯದಲ್ಲಿ ವಿಮಾನದ ಟೈರ್ ಸ್ಫೋಟಗೊಂಡ ಬಗ್ಗೆ ವಿಮಾನ ನಿಲ್ದಾಣದ ಕಂಟ್ರೋಲರ್ ಅಧಿಕಾರಿಗಳಿಗೆ ಪೈಲೆಟ್ ಮಾಹಿತಿ ರವಾನಿಸಿದ್ದಾರೆ. ಸದ್ಯ ಪವಾಡಸದೃಶರಾಗಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಜಯಪ್ರದ ಆಗಿ ಬೆಳೆದ ಲಲಿತಾ ರಾಣಿ: ಮೊದಲ ಚಿತ್ರದ ಫೋಟೋಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ
ಸಂಸತ್ತಿನಲ್ಲೇ ಅಶ್ಲೀಲ ವಿಡಿಯೋ ನೋಡಿದ ಬ್ರಿಟನ್ ಸಚಿವ! ಬಹುತೇಕ ಸದಸ್ಯರ ವಿರುದ್ಧ ಲೈಂಗಿಕ ಕಿರುಕುಳ ಆರೋಪ