ನ್ಯಾಮತಿ: ತಾಲೂಕಿನ ದೊಡ್ಡೇರಿ ಗ್ರಾಮದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಬೃಹತ್ ಹೆಬ್ಬಾವನ್ನು ಹಿಡಿದು, ಹರಮಘಟ್ಟ ರಾಜ್ಯ ಅರಣ್ಯ ವಲಯದಲ್ಲಿ ಬಿಡಲಾಯಿತು.
ಗ್ರಾಮದ ವೀರಭದ್ರೇಶ್ವರ ದೇವಾಲಯದ ಸಮೀಪ ಕಂಡುಬಂದ ಸುಮಾರು 9 ಅಡಿ ಉದ್ದದ ಹೆಬ್ಬಾವು ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ ಮೂಡಿಸಿತ್ತು.
ಸಾರ್ವಜನಿಕರು ತಕ್ಷಣವೇ ಶಿವಮೊಗ್ಗದ ಉರಗರಕ್ಷಕ ಸ್ನೇಕ್ ಕಿರಣ್ ಅವರನ್ನು ಸಂಪರ್ಕಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಕಿರಣ್ ಹೆಬ್ಬಾವನ್ನು ಹಿಡಿದು, ಹರಮಘಟ್ಟ ರಾಜ್ಯ ಅರಣ್ಯ ವಲಯದಲ್ಲಿ ಸುರಕ್ಷಿತವಾಗಿ ಬಿಟ್ಟರು.
ಈ ವೇಳೆ ಮಾತನಾಡಿದ ಕಿರಣ್, ಹೆಬ್ಬಾವು ವಿಷಕಾರಕ ಆಗದಿದ್ದರೂ ಅದರ ಕಡಿತದಿಂದ ಹಲವಾರು ಸಮಸ್ಯೆ ಎದುರಿಸಬೇಕಾಗುತ್ತದೆ. ಸಾರ್ವಜನಿಕರು ಯಾವುದೇ ಹಾವು ಕಂಡರೂ ಅವುಗಳನ್ನು ಕೊಲ್ಲದೆ, ತೊಂದರೆ ಕೊಡದೆ ರಕ್ಷಣೆ ಮಾಡಬೇಕು. ಎಲ್ಲಿಯಾದರೂ ಹಾವುಗಳು ಕಂಡುಬಂದಲ್ಲಿ ಉರಗ ರಕ್ಷಕರನ್ನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.