More

    ಬೆಡ್​ರೂಮ್​ ಸೀನ್​ಗಳಲ್ಲಿ ನಟಿಸುವಾಗ ಏನು ಅನ್ಸುತ್ತೆ? ಆ ದಿನಗಳು ಖ್ಯಾತಿಯ ಅರ್ಚನಾ ಉತ್ತರ ವೈರಲ್​

    ನೋಡಲು ಸುಂದರವಾಗಿದ್ದರೂ ಕೆಲ ನಟಿಯರಿಗೆ ಅದೃಷ್ಟ ಕೈಹಿಡಿಯುವುದಿಲ್ಲ. ಹೀಗಾಗಿ ಬೆಳ್ಳಿತೆರೆಗೆ ಬಂದಷ್ಟೇ ವೇಗವಾಗಿ ಕಣ್ಮರೆಯಾಗಿಬಿಡುತ್ತಾರೆ. ಅಂತಹ ನಾಯಕಿಯರ ಸಾಲಿಗೆ ನಟಿ ಅರ್ಚನಾ ಶಾಸ್ತ್ರಿ ಕೂಡ ಸೇರಿಕೊಳ್ಳುತ್ತಾರೆ. ಕನ್ನಡದಲ್ಲಿ “ಆ ದಿನಗಳು” ಸಿನಿಮಾದಲ್ಲಿ ನಟ ಚೇತನ್​ಗೆ ಅರ್ಚನಾ ನಾಯಕಿಯಾಗಿದ್ದರು. ಆದರೆ, ಕನ್ನಡದಲ್ಲಿ ನಟಿಸಿದ್ದು ಕೆಲವೇ ಸಿನಿಮಾಗಳಲ್ಲಿ. ಕೊನೆಯದಾಗಿ ಪುನೀತ್​ ರಾಜ್​ಕುಮಾರ್​ ನಟನೆಯ ಮೈತ್ರಿ ಸಿನಿಮಾದಲ್ಲಿ ನಟಿಸಿದರು.

    ಅಂದಹಾಗೆ ಅರ್ಚನಾ ಕನ್ನಡಕ್ಕಿಂತ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಹೇಳಿಕೊಳ್ಳುವಷ್ಟು ಯಶಸ್ಸು ಸಿಗಲಿಲ್ಲ. ತೆಲುಗಿನ ಬಿಗ್​ಬಾಸ್ ಸೀಸನ್ 1 ರಲ್ಲಿ ಅರ್ಚನಾ ಸ್ಪರ್ಧಿಯಾಗಿದ್ದರು. ಉತ್ತಮ ಪ್ರದರ್ಶನದೊಂದಿಗೆ ಪ್ರೇಕ್ಷಕರಿಗೆ ಹತ್ತಿರವಾದರು. ಇದಾದ ಬಳಿಕ ಬೆಳ್ಳಿತೆರೆಯಲ್ಲಿ ಅರ್ಚನಾಗೆ ಒಳ್ಳೆಯ ಅವಕಾಶಗಳು ಬಂದವು. ಆದರೆ, ಮದುವೆಯ ನಂತರ ಅರ್ಚನಾ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ಪ್ರಸಿದ್ಧ ನಟ ಶಿವಾಜಿ ಅವರೊಂದಿಗಿನ ಬೋಲ್ಡ್ ದೃಶ್ಯಗಳ ಬಗ್ಗೆ ಸಂಚಲನ ಸೃಷ್ಟಿಸುವಂತಹ ಕಾಮೆಂಟ್​ಗಳನ್ನು ಮಾಡಿದ್ದಾರೆ. ಸದ್ಯ ಈ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಅರ್ಚನಾ ಅವರು ಸಂದರ್ಶನವೊಂದರಲ್ಲಿ ತಮ್ಮ ವೃತ್ತಿಜೀವನದ ಅನುಭವಗಳ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡುವಾಗ ನಿಮಗೆ ನಟಿಸುತ್ತಿರುವಂತೆ ಅನಿಸುತ್ತದೆಯೇ? ಎಂದು ಆ್ಯಂಕರ್​ ಕೇಳಿದ ಪ್ರಶ್ನೆಗೆ ಅರ್ಚನಾ ಭಾವುಕವಾಗಿ ಉತ್ತರ ನೀಡಿದ್ದಾರೆ. ಶೂಟಿಂಗ್​ ಸಮಯದಲ್ಲಿ ಭಾವನೆಗೆ ಸ್ಥಳವಿಲ್ಲ. ಏಕೆಂದರೆ, ಸೆಟ್‌ನಲ್ಲಿ ನಮ್ಮ ಪಕ್ಕದಲ್ಲಿ ಸಾಕಷ್ಟು ಜನರಿರುತ್ತಾರೆ. ಆ ದೃಶ್ಯಕ್ಕೆ ತಕ್ಕಂತೆ ಅಭಿನಯ ನೀಡುತ್ತೇವೆ ಅಷ್ಟೇ. ರೊಮ್ಯಾಂಟಿಕ್ ದೃಶ್ಯಗಳಲ್ಲಿ ಅಂತಹ ಭಾವನೆ ಬರದಿದ್ದರೆ ಜನ ನಗುತ್ತಾರೆ. ನಾನು ಯಾವ ಹೀರೋ ಜೊತೆ ರೊಮ್ಯಾಂಟಿಕ್ ಸೀನ್ ಮಾಡ್ತೀನೋ ಅವರನ್ನು ಒಂದು ವಸ್ತು ಎಂದು ಭಾವಿಸುತ್ತೇನೆ. ಹೀಗಾಗಿ ನಾನು ಭಾವುಕಳಾಗುವುದಿಲ್ಲ ಎಂದಿದ್ದಾರೆ.

    ನಾಯಕ ಶಿವಾಜಿ ಜತೆ ‘ಕಮಲತೊ ನಾ ಗರ್ಭ’ ಸಿನಿಮಾದಲ್ಲಿ ನಟಿಸಿದಾಗ ಕೆಲವು ಬೋಲ್ಡ್ ದೃಶ್ಯಗಳಲ್ಲಿ ನಟಿಸಿದ್ದೆ. ಆದರೆ, ಒಮ್ಮೆಯೂ ರೊಮ್ಯಾಂಟಿಕ್ ಅನ್ನಿಸಲಿಲ್ಲ. ಅಲ್ಲಿನ ವಿಷಯಗಳು ಹಾಗೆ. ಚಿತ್ರದಲ್ಲಿನ ದೃಶ್ಯಗಳು ಉತ್ತಮವಾಗಬೇಕು ಎಂಬ ಉದ್ದೇಶದಿಂದ ಮೊದಲೇ ಶಿವಾಜಿ ಬಳಿ ಅಭ್ಯಾಸ ಮಾಡುತ್ತಿದ್ದೆ. ಏಕೆಂದರೆ ರೊಮ್ಯಾಂಟಿಕ್ ದೃಶ್ಯಗಳನ್ನು ಪುನರಾವರ್ತಿಸುವುದು ಒಳ್ಳೆಯದಲ್ಲ. ಆದರೂ ಹೀಗೆ ಮಾಡೋಣ ಎಂದು ಮಾತಾಡಿಕೊಂಡು ದೃಶ್ಯಗಳನ್ನು ಕಂಪೋಸ್ ಮಾಡುತ್ತಿದ್ದೆವು. ‘ಕಮಲತೋ ನಾ ತರಬ’ ಸಿನಿಮಾದ ಬೋಲ್ಡ್ ದೃಶ್ಯಗಳನ್ನು ಒಂದೇ ಟೇಕ್​ನಲ್ಲಿ ಮುಗಿಸಿದೆವು ಎಂದರು.

    ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸುವಾಗ ಇತರ ನಟರಿಗೆ ಹೇಗೆ ಅನಿಸುತ್ತದೆ ಎಂದು ನನಗೆ ತಿಳಿದಿಲ್ಲ. ನನ್ನ ಮಟ್ಟಿಗೆ ಇದು ಕೇವಲ ಒಂದು ದೃಶ್ಯ ಅನಿಸುತ್ತದೆ. ಶಿವಾಜಿ ಈಗಾಗಲೇ ಮದುವೆಯಾದ ವ್ಯಕ್ತಿ ಹಾಗೂ ನನ್ನ ಕೋಸ್ಟಾರ್. ಹಾಗಾಗಿ ನನಗೆ ಯಾವುದೇ ಭಾವನೆ ಇಲ್ಲ ಎಂದು ಅರ್ಚನಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. (ಏಜೆನ್ಸೀಸ್​)

    ನಿಮಗೆಲ್ಲ ಮಸಾಲಾ ಮುಗಿಯಿತು ಫ್ರೆಂಡ್ಸ್​! ಗಂಭೀರ್​ ಅಪ್ಪುಗೆ ಕುರಿತು ಕೊನೆಗೂ ಮೌನ ಮುರಿದ ಕೊಹ್ಲಿ

    ಕುಣಿಗಲ್​ನಲ್ಲಿ ಕಾಂಗ್ರೆಸ್​ ಮುಖಂಡರ ದರ್ಪ: ಡಾ. ಮಂಜುನಾಥ್ ಪರ ಕೆಲಸ ಮಾಡಿದವರ ಮೇಲೆ ಹಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts