ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತನ್ನ ನೌಕರರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಕೊರೊನಾ ಲಾಕ್ ಡೌನ್ ಅವಧಿಯ ತನ್ನ ಸಿಬ್ಬಂದಿ ಹಾಜರಾತಿಯನ್ನ ಪರಿಗಣಿಸದಿರುವಂತೆ ಸುತ್ತೋಲೆ ಹೊರಡಿಸಿದೆ. ಬಿಎಂಟಿಸಿ ಎಂಡಿ ಸಿ ಶಿಕಾ ಅವರು ಸುತ್ತೋಲೆ ಹೊರಡಿಸಿದ್ದಾರೆ. ಲಾಕ್ ಡೌನ್ ಅವಧಿಯನ್ನ ವಿಶೇಷ ರಜೆ ಎಂದು ಪರಿಗಣಿಸಲು ಸೂಚನೆ ನೀಡಲಾಗಿದೆ. ಇದರಿಂದ ನೌಕರರು ಗಳಿಕೆ ರಜೆ ಊಳಿಸಿಕೊಂಡಂತಾಗಿದೆ.
ಲಾಕ್ ಡೌನ್ ಸಮಯದಲ್ಲಿ ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಕೇವಲ ತುರ್ತು ಕಾರ್ಯಾಚರಣೆಗೆ ಕೆಲ ಬಸ್ಸುಗಳನ್ನ ಮಾತ್ರ ರಸ್ತೆಗೆ ಬಿಎಂಟಿಸಿ ಇಳಿಸಿತ್ತು.
ಪಂಚರಾಜ್ಯ ಚುನಾವಣೆ: ಮೇ 2 ರಂದು ಫಲಿತಾಂಶ, ಬಂಗಾಳಕ್ಕೆ 8 ಹಂತದಲ್ಲಿ ಮತದಾನ!