ರಾಯಚೂರು: ಬಿಜೆಪಿಯ ಚುನಾವಣಾ ಸಮಾವೇಶಕ್ಕೆ ಹೋಗಿದ್ದ ಕಾರ್ಯಕರ್ತನ ತಲೆಗೆ ಗಂಭೀರ ಗಾಯವಾಗಿರುವ ಪ್ರಕರಣ ನಡೆದಿದೆ. ಸಿಂಧನೂರು ಬಳಿ ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ: ಅಂಬರೀಷ್ ಮೃತಪಟ್ಟಾಗ ರಮ್ಯಾ ಏಕೆ ಬಂದಿರಲಿಲ್ಲ?; ಕಾರಣ ತಿಳಿಸಿದ ನಟಿ
ಕಾರಟಗಿ ತಾಲೂಕಿನ ಯರಡೋಣ ಗ್ರಾಮದ ರವಿ ಸಿಂಗ್ ಗಾಯಗೊಂಡಿರುವ ಕಾರ್ಯಕರ್ತ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಾಗತ ಕಾರ್ಯಕ್ರಮಕ್ಕೆ ಹೋಗಿದ್ದಾಗ ಈತ ಗಾಯಗೊಂಡಿದ್ದಾನೆ.
ಇದನ್ನೂ ಓದಿ: ಕಾಂಗ್ರೆಸ್ಗೆ 30-40 ಸ್ಥಾನ ಅಂತ ಇತ್ತು, ಈಗ ಅಷ್ಟೂ ಬರಲ್ಲ: ಅಣ್ಣಾಮಲೈ
ಸಿಂಧನೂರು ಮೋದಿ ಸಮಾವೇಶದ ಹೆಲಿಪ್ಯಾಡ್ ಬಳಿ ಈ ಘಟನೆ ನಡೆದಿದೆ. ಹೆಲಿಪ್ಯಾಡ್ ಬಳಿ ನಿರ್ಮಾಣ ಮಾಡಿದ್ದ ಟೆಂಟ್, ಹೆಲಿಕಾಪ್ಟರ್ ಬರುತ್ತಿದ್ದಂತೆ ಗಾಳಿಗೆ ಹಾರಿ ಬಿದ್ದಿದೆ. ಹತ್ತಿರವೇ ಇದ್ದ ರವಿ ಸಿಂಗ್ ಇದರಿಂದ ಗಾಯಗೊಂಡಿದ್ದು, ಅವರನ್ನು ಕಾರಟಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದು ಡೈವೋರ್ಸ್ ಫೋಟೋಶೂಟ್: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!