More

    ಕಾಂಗ್ರೆಸ್​​ಗೆ 30-40 ಸ್ಥಾನ ಅಂತ ಇತ್ತು, ಈಗ ಅಷ್ಟೂ ಬರಲ್ಲ: ಅಣ್ಣಾಮಲೈ

    ಬೆಂಗಳೂರು: ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 30-40 ಸ್ಥಾನ ಗಳಿಸುತ್ತದೆ ಅಂತ ಇತ್ತು, ಆದರೆ ಈಗ ಅಷ್ಟೂ ಬರಲ್ಲ ಎಂಬುದು ಖಚಿತವಾಗಿದೆ ಎಂದು ಕರ್ನಾಟಕ ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ ಹೇಳಿದ್ದಾರೆ. ಕಾಂಗ್ರೆಸ್​ ಪ್ರಣಾಳಿಕೆಯಲ್ಲಿನ ಬಜರಂಗದಳ ಬ್ಯಾನ್ ವಿಚಾರವಾಗಿ ಅವರು ಈ ಪ್ರತಿಕ್ರಿಯೆ ನೀಡಿದರು.

    ನಾವೆಲ್ಲರೂ ಕಾಂಗ್ರೆಸ್ ಪ್ರಣಾಳಿಕೆ ನೋಡಿದ್ದೇವೆ. ಖಾಲಿ ಡಬ್ಬದ ರೀತಿ, ಬಹಳ ಶಬ್ದ ಬರುತ್ತದೆ. ಅವರ ಪ್ರಣಾಳಿಕೆ ಹಳೆಯ ಕಾಲದ ರೀತಿಯಲ್ಲಿ ಇದೆ. ದೇಶ ಹೇಗೆ ಹೋಗುತ್ತಿದೆ ಅಂತ ಅವರಿಗೆ ಗೊತ್ತಿಲ್ಲ. ಬಜರಂಗದಳ ಬ್ಯಾನ್ ಬಗ್ಗೆ ಹೇಳಿದ್ದಾರೆ. ಮೊದಲನೆಯದಾಗಿ ಅವರು ಅಧಿಕಾರಕ್ಕೇ ಬರಲ್ಲ ಎಂದು ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.

    ಇದನ್ನೂ ಓದಿ: ಅಂಬರೀಷ್ ಮೃತಪಟ್ಟಾಗ ರಮ್ಯಾ ಏಕೆ ಬಂದಿರಲಿಲ್ಲ?; ಕಾರಣ ತಿಳಿಸಿದ ನಟಿ

    ಪಿಎಫ್‌ಐ ಏನು, ಅದು ಯಾವ ಉದ್ದೇಶದ ಸಂಘಟನೆ ಎನ್ನುವುದನ್ನು ತಿಳಿದುಕೊಳ್ಳಿ. ಅವರ ಮೇಲೆ ಯುಎಪಿಎ ಕೇಸ್ ಇದ್ದು, ಎನ್ಐಎ ಕೇಸ್ ವಿಚಾರಣೆ ನಡೆಸುತ್ತಿದೆ. ಮಂಗಳೂರು, ದಕ್ಷಿಣಕನ್ನಡ, ಕೇರಳ, ತಮಿಳುನಾಡಿನಲ್ಲಿ ಅವರು ಹೆಚ್ಚು ಸಕ್ರಿಯರಾಗಿದ್ದರು. ಕೇರಳ, ಕರ್ನಾಟಕದಲ್ಲಿ ಒಂದೇ ಮಾದರಿ ಹತ್ಯೆ ಮಾಡಲಾಗಿದೆ. ಹಾಗಾಗಿ ಅದನ್ನ ಬ್ಯಾನ್ ಮಾಡಲಾಗಿದೆ. ಅಂಥ ಪಿಎಫ್​ಐಗೆ ಬಜರಂಗದಳವನ್ನು ಹೋಲಿಸಿದ್ದಾರೆ. ಕಾಂಗ್ರೆಸ್ 30-40 ಸ್ಥಾನ ಗಳಿಸುತ್ತದೆ ಅಂತ ಇತ್ತು, ಈಗ ಅಷ್ಟು ಕೂಡ ಬರಲ್ಲ. ಇಲ್ಲಿರುವ ಜನ ಮೇ 10ರಂದು ಅವರಿಗೆ ದೊಡ್ಡಮಟ್ಟದಲ್ಲಿ ಬುದ್ದಿ ಕಲಿಸುತ್ತಾರೆ ಎಂದರು.

    ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆ ನೀಡಲು ಹೋಗಿದ್ದ ಸಹೋದರಿಯರಿಬ್ಬರ ಸಾವು!

    ಪಿಎಫ್​ಐ ಮನಸ್ಥಿತಿ ಹೇಗಿದೆ ಎಂಬುನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಪಿಎಫ್‌ಐ ಬ್ಯಾನ್ ಯಾಕೆ ಮಾಡಿದ್ದಾರೆ? ಸ್ಲೀಪರ್ ಸೆಲ್, ಭಯೋತ್ಪಾದನಾ ಕೃತ್ಯದ ಬಗ್ಗೆ ಅರ್ಥ ಮಾಡಿಕೊಳ್ಳಿ. ಬಜರಂಗದಳ ಬ್ಯಾನ್ ವಿಚಾರವನ್ನು ಬರೀ ಖಂಡಿಸುವುದಲ್ಲ, ಅತ್ಯುಗ್ರವಾಗಿ ವಿರೋಧ ಮಾಡುತ್ತೇನೆ ಎಂದರು.

    ಇದು ಡೈವೋರ್ಸ್ ಫೋಟೋಶೂಟ್​: ನನಗೆ 99 ಸಮಸ್ಯೆಗಳಿವೆ, ಆದರೆ ಪತಿ ಇಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts