More

    ಕಾಂಗ್ರೆಸ್​ ನಾಯಕರು ಶ್ರೀ ರಾಮನ ಕಪಿ ಸೇನೆಯಂತೆ ಬೆತ್ತಲೆ ಓಡಾಬೇಕು ಎಂದ ಬಿಜೆಪಿ ನಾಯಕ..!

    ನವದೆಹಲಿ: ಇದೀಗ ಬಿಜೆಪಿ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿ, ದುಷ್ಯಂತ್​ ಗೌತಮ್​ ಕಾಂಗ್ರೆಸ್​ ನಾಯಕರು ರಾಹುಲ್​ ಗಾಂಧಿಯನ್ನು ರಾಮನಿಗೆ ಹೋಲಿಸಿದರೆ ಅವರೆಲ್ಲರೂ ಬೆತ್ತಲೆ ಓಡಾಡಬೇಕು ಎಂದು ಕಾಲೆಳೆದಿದ್ದಾರೆ.

    ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದರು. ಇದಾದ ಮೇಲೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್, ಮಂಗಳವಾರ, ‘ಕಾಂಗ್ರೆಸ್​ ನಾಯಕರು ಶ್ರೀ ರಾಮನ ಸೇನೆಯಂತೆ ಬೆತ್ತಲೆ ತಿರುಗಾಡಬೇಕು ಎಂದು ಹೇಳಿದ್ದಾರೆ.

    ಗೌತಮ್ ದುಷ್ಯಂತ್​ ‘ರಾಹುಲ್​ ಗಾಂಧಿ ರಾಮನ ಅವತಾರವಾಗಿದ್ದರೆ, ಅವರು ತಮ್ಮ ‘ಸೇನೆ’ಗೆ ಚಳಿ ಆಗದಂತೆ ಯಾವ ಪ್ರಸಾದ ಸೇವಿಸುತ್ತಾರೆ ಎಂದು ಅವರ ಪಕ್ಷದ ನಾಯಕರಿಗೆ ಹೇಳಬೇಕು. ಅವರ ‘ಸೇನೆ’ ಯಾಕೆ ಬಟ್ಟೆ ಇಲ್ಲದೇ ತಿರುಗಾಡುವುದಿಲ್ಲ? ಭಗವಾನ್ ರಾಮನ ‘ಸೇನೆ’ ಮಾಡಿದಂತೆ ಕಾಂಗ್ರೆಸ್​ ನಾಯಕರೂ ಬೆತ್ತಲೆಯಾಗಿ ತಿರುಗಬೇಕು” ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts