ನವದೆಹಲಿ: ಇದೀಗ ಬಿಜೆಪಿ ನಾಯಕ ಮತ್ತು ಪ್ರಧಾನ ಕಾರ್ಯದರ್ಶಿ, ದುಷ್ಯಂತ್ ಗೌತಮ್ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದರೆ ಅವರೆಲ್ಲರೂ ಬೆತ್ತಲೆ ಓಡಾಡಬೇಕು ಎಂದು ಕಾಲೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ರಾಹುಲ್ ಗಾಂಧಿಯನ್ನು ರಾಮನಿಗೆ ಹೋಲಿಸಿದ್ದರು. ಇದಾದ ಮೇಲೆ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್, ಮಂಗಳವಾರ, ‘ಕಾಂಗ್ರೆಸ್ ನಾಯಕರು ಶ್ರೀ ರಾಮನ ಸೇನೆಯಂತೆ ಬೆತ್ತಲೆ ತಿರುಗಾಡಬೇಕು ಎಂದು ಹೇಳಿದ್ದಾರೆ.
ಗೌತಮ್ ದುಷ್ಯಂತ್ ‘ರಾಹುಲ್ ಗಾಂಧಿ ರಾಮನ ಅವತಾರವಾಗಿದ್ದರೆ, ಅವರು ತಮ್ಮ ‘ಸೇನೆ’ಗೆ ಚಳಿ ಆಗದಂತೆ ಯಾವ ಪ್ರಸಾದ ಸೇವಿಸುತ್ತಾರೆ ಎಂದು ಅವರ ಪಕ್ಷದ ನಾಯಕರಿಗೆ ಹೇಳಬೇಕು. ಅವರ ‘ಸೇನೆ’ ಯಾಕೆ ಬಟ್ಟೆ ಇಲ್ಲದೇ ತಿರುಗಾಡುವುದಿಲ್ಲ? ಭಗವಾನ್ ರಾಮನ ‘ಸೇನೆ’ ಮಾಡಿದಂತೆ ಕಾಂಗ್ರೆಸ್ ನಾಯಕರೂ ಬೆತ್ತಲೆಯಾಗಿ ತಿರುಗಬೇಕು” ಎಂದಿದ್ದಾರೆ. (ಏಜೆನ್ಸೀಸ್)