More

    ಬಿಜೆಪಿ ಕಚೇರಿಯಲ್ಲಿ ವೀರ ಬಾಲ ದಿನಾಚರಣೆ

    ಬೆಂಗಳೂರು:
    ಬಿಜೆಪಿ ಕಚೇರಿಯಲ್ಲಿ ಗುರು ಗೋವಿಂದ ಸಿಂಗ್ ಅವರ ಪುತ್ರರಾದ ಜೋರಾವರ್ ಸಿಂಗ್ ಮತ್ತು ಫತೆಹ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ವೀರ ಬಾಲ ದಿನವನ್ನು ಆಚರಣೆ ಮಾಡಲಾಯಿತು.
    ದಾಳಿಕೋರ ಔರಂಗಜೇಬನ ಜೀವ ಬೆದರಿಕೆಗೂ ಜಗ್ಗದೇ ಪ್ರಾಣಾರ್ಪಣೆ ಮಾಡಿದ್ದವರ ಸ್ಮರಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಈ ದಿನ ಆಚರಣೆ ಮಾಡುತ್ತಿರುವುದಾಗಿ ಬಿಜೆಪಿ ಅಧ್ಯಕ್ಷ ವೈ.ಬಿ.ವಿಜಯೇಂದ್ರ ತಿಳಿಸಿದರು.
    ಹತ್ತು ವರ್ಷ ವಯಸ್ಸನ್ನೂ ದಾಟದ ವೀರ ಮಕ್ಕಳ ಕಣ್ಣುಗಳಲ್ಲಿದ್ದ ಔರಂಗಜೇಬ್ ವಿರುದ್ಧದ ಜ್ವಾಲೆ, ಎಂಥವರನ್ನೂ ಮೀರಿಸುವಂತಿದ್ದ ಧೈರ್ಯ- ಶೌರ್ಯ ಅವಿಸ್ಮರಣೀಯ. ತಾಯ್ನಡಿಗಾಗಿ ಬಲಿದಾನಗೈದ ಶೌರ್ಯ ಬಾಲಕರನ್ನು ಹೆಮ್ಮೆಯಿಂದ ಸ್ಮರಿಸೋಣ. ಈ ಇಬ್ಬರೂ ಜೀವ ತೆತ್ತ ಸ್ಥಳ ಫತೆಹ್ ಗಢ ಸಾಹಿಬ್ ಇಂದು ಸಿಖ್ಖರ ಪುಣ್ಯಸ್ಥಳವಾಗಿರುವುದು ಹೆಮ್ಮೆಯ ಸಂಗತಿ ಎಂದರು.
    ವಿಧಾನಸಭೆಯ ವಿರೋಧ ಪಕ್ಷದ ನೂತನ ಮುಖ್ಯ ಸಚೇತಕ ದೊಡ್ಡನಗೌಡ ಹೆಚ್ ಪಾಟೀಲ್ ಮಾತನಾಡಿ, ಜೀವದ ಅಂಗು ತೊರೆದು ದೇಶಕ್ಕಾಗಿ ಬಲಿದಾನ ಮಾಡಿದವರ ತ್ಯಾಗ ನಮಗೆ ಆದರ್ಶವಾಗಬೇಕು ಎಂದರು.
    ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಗೌಡ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೆರೆ, ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts