ಕೋಲ್ಕತ್ತಾ: ಗುವಾಹಟಿ-ಬಿಕಾನೇರ್ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ ಅವಘಡ ಸಂಭವಿಸಿದ ಘಟನೆ ಇಂದು ಸಂಜೆ 5 ಗಂಟೆಯ ಸುಮಾರಿಗೆ ಪ.ಬಂಗಾಳದಲ್ಲಿ ನಡೆದಿದೆ.
ಪ.ಬಂಗಾಳದ ಡೊಮೊಹಾನಿ ಎಂಬಲ್ಲಿ ತೆರಳುತ್ತಿದ್ದಾಗ ರೈಲು ಹಳಿ ತಪ್ಪಿದ್ದು 12 ಬೋಗಿಗಳು ಚೆಲ್ಲಾಪಿಲ್ಲಿಯಾಗಿವೆ. ಈ ಘಟನೆಯಲ್ಲಿ ಕನಿಷ್ಟ ಮೂರು ಮಂದಿ ಸಾವನ್ನಪ್ಪಿದ್ದು, ಗಂಭೀರ ಗಾಯಗೊಂಡ 20 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವಘಡದ ಮಾಹಿತಿ ಪಡೆದ ಡಿಆರ್ಎಂ ಮತ್ತು ಎಡಿಆರ್ಎಂ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಘಟನೆಯ ಬಗ್ಗೆ ರೈಲ್ವೇ ಇಲಾಖೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ.
ಯೋಗಿ ಸಂಪುಟದಿಂದ ಉರುಳಿತು ಮತ್ತೊಂದು ‘ವಿಕೆಟ್’! ಮೂವರು ಸಚಿವರು, 9 ಶಾಸಕರ ರಾಜೀನಾಮೆ