ಹೈದರಾಬಾದ್: ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ಬಾಸ್ ಖ್ಯಾತಿಯ ಶಾನು ಅಲಿಯಾಸ್ ಷಣ್ಮುಖ ಜಸ್ವಂತ್ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದಾರೆ. ಪ್ರಕರಣವೊಂದರಲ್ಲಿ ಶಾನು ಸಹೋದರ ಸಂಪತ್ ವಿನಯ್ನನ್ನು ಬಂಧಿಸಲು ಹೋದಾಗ ಅನಿರೀಕ್ಷಿತವಾಗಿ ಗಾಂಜಾ ಸಮೇತ ಶಾನು ಸಿಕ್ಕಿಬಿದ್ದಿದ್ದಾರೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಸಂಪತ್ ವಿನಯ್ ವೈಜಾಗ್ ಮೂಲದ ಯುವತಿಯ ಜತೆ ಮೂರು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಯುವತಿ ವೈದ್ಯೆಯಾಗಿದ್ದು, ಆಕೆಯ ತಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ತಾಯಿಯ ಚಿಕಿತ್ಸೆ ಕಾರಣದಿಂದಾಗಿ ಮದುವೆಯನ್ನು ಯುವತಿ ಮುಂದೂಡಿದ್ದಳು. ಆದರೆ, ಇತ್ತೀಚೆಗೆ ಮದುವೆ ಮತ್ತೊಮ್ಮೆ ನಿಗದಿಯಾಗಿತ್ತು. ಇನ್ನೂ ಆರು ದಿನಗಳಲ್ಲಿ ಮದುವೆ ನಡೆಯಬೇಕಿತ್ತು. ಇದರ ನಡುವೆ ಸಂಪತ್ ವಿನಯ್ ಆಕೆಗೆ ವಂಚನೆ ಮಾಡಿ ಮತ್ತೊಂದು ಯುವತಿಯನ್ನು ಮದುವೆಯಾಗಿದ್ದಾನೆ.
ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಸಂತ್ರಸ್ತ ಯುವತಿಯು ಹೈದರಾಬಾದ್ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ನನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು, ಮದುವೆಗೆ ಇನ್ನೂ ಆರು ದಿನ ಇರುವಾಗ ಬೇರೊಂದು ಯುವತಿಯನ್ನು ಮದುವೆಯಾಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂಪತ್ ವಿನಯ್, ಹೈದರಾಬಾದ್ನಲ್ಲಿರುವ ಸಹೋದರ ಷಣ್ಮುಖ ಜಸ್ವಂತ್ ಫ್ಲ್ಯಾಟ್ನಲ್ಲಿ ಇದ್ದಾನೆ ಎಂದು ತಿಳಿದು ಅಲ್ಲಿಗೆ ಹೋದರು.
ಪೊಲೀಸರು ಹೋದಂತ ಸಮಯದಲ್ಲಿ ಸಂಪತ್ ಅಲ್ಲಿರಲಿಲ್ಲ. ಪೊಲೀಸರು ಬರುವುದನ್ನು ತಿಳಿದು ಅಲ್ಲಿಂದ ಮೊದಲೇ ಎಸ್ಕೇಪ್ ಆಗಿದ್ದ. ಪೊಲೀಸರು ಮನೆಯನ್ನು ಹುಡುಕಾಡಿದಾಗ ಡ್ರಗ್ಸ್ ಪತ್ತೆಯಾಗಿತ್ತು. ಈ ವೇಳೆ ಮನೆಯಲ್ಲಿದ್ದ ಷಣ್ಮುಖ ಜಸ್ವಂತ್ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೆಲವೊತ್ತಿನ ಬಳಿಕ ಸಂಪತ್ ವಿನಯ್ ಬಂಧನವೂ ಆಗಿದೆ.
ಸದ್ಯ ಇಬ್ಬರು ಪೊಲೀಸರ ವಶದಲ್ಲಿದ್ದಾರೆ. ಒಂದು ತಿಂಗಳ ಹಿಂದಷ್ಟೇ ಷಣ್ಮುಖ್ ಜಸ್ವಂತ್ ಹಿಟ್ ಅಂಡ್ ರನ್ ಕೇಸ್ ನಲ್ಲಿ ಸಿಕ್ಕಿಬಿದ್ದಿದ್ದರು. ತೆಲಂಗಾಣ ಸರ್ಕಾರ ಡ್ರಗ್ಸ್ ಮತ್ತು ಗಾಂಜಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವಾಗಲೇ ಷಣ್ಮುಖ್ ಗಾಂಜಾ ಸಹಿತ ಬಂಧನವಾಗಿರುವುದು ಸಂಚಲನ ಮೂಡಿಸಿದೆ. ಆದರೆ ಈ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿಯಬೇಕಿದೆ. (ಏಜೆನ್ಸೀಸ್)
ಬಿಗ್ಬಾಸ್ಗೆ ಹೋಗಿದ್ದೇ ತಪ್ಪಾಯ್ತಾ? ಎರಡು ಪ್ರೇಮ ಪ್ರಕರಣಗಳ ನಡುವೆ ಬತ್ತಿ ಇಟ್ಟ ಬಿಗ್ಬಾಸ್
ಬಿಗ್ಬಾಸ್ ಮನೆಯೊಳಗೆ ರೋಮ್ಯಾನ್ಸ್! ಫೇಮಸ್ ಯೂಟ್ಯೂಬರ್ ಪ್ರೀತಿಗೆ ಗುಡ್ ಬೈ ಹೇಳಿದ ನಟಿ ದೀಪ್ತಿ
ನೀನು ಬಿಗ್ಬಾಸ್ನಲ್ಲಿದ್ದಾಗ ತನೀಶ್ ಜತೆ ಮಾಡಿದ್ದೇನು? ದೀಪ್ತಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಶ್ರೀರೆಡ್ಡಿ