More

    ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಯಡವಟ್ಟು

    ಬೆಂಗಳೂರು: ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಅವರು ಯಡವಟ್ಟು ಮಾಡಿಕೊಂಡಿದ್ದಾರೆ. ವಿಶ್ವ ಕುಸ್ತಿ ಚಾಂಪಿಯನ್​​ಶಿಪ್​ನಲ್ಲಿ ಚಿನ್ನದ ಪದಕ ಗೆದ್ದ ಪ್ರಿಯಾ ಮಲಿಕ್ ಒಲಿಂಪಿಕ್ಸ್​ನಲ್ಲೇ ಚಿನ್ನ ಗೆದ್ದಿದ್ದಾರೆಂದು ಶುಭಾಶಯ ತಿಳಿಸಿದ್ದಾರೆ.

    ಸದ್ಯ ಒಲಿಪಿಂಕ್ಸ್​ ಕಡೆ ಎಲ್ಲರ ಗಮನವಿದೆ. ಅದರಲ್ಲೂ ಭಾನುವಾರದಂದು ಮಣಿಪುರ ಮೀರಾಬಾಯಿ ವೇಟ್​ ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದ ಮೇಲಂತೂ ಒಲಿಂಪಿಕ್ಸ್ ಕ್ರೇಜ್ ಇನ್ನೂ ಹೆಚ್ಚಾಗಿದೆ ಎಂದೇ ಹೇಳಬಹುದು. ಇದೇ ಸಮಯದಲ್ಲಿ ವಿಶ್ವ ಕುಸ್ತಿ ಚಾಂಪಿಯನ್​ಶಿಪ್ ಕೂಡ ನಡೆದಿದ್ದು, ಅದರಲ್ಲಿ ಭಾರತದ ಪ್ರಿಯಾ ಮಲಿಕ್ ಜಯಭೇರಿ ಬಾರಿಸಿದ್ದಾರೆ.

    ಸೋಮವಾರದಂದು ಪ್ರಿಯಾ ಮಲಿಕ್ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಜಯ ಸಾಧಿಸಿದ ನಂತರ ಅನೇಕರು ಅವರಿಗೆ ವಿಶ್ ಮಾಡಿದ್ದಾರೆ. ಆಕೆ ಒಲಿಂಪಿಕ್ಸ್​ನಲ್ಲೇ ಗೆದ್ದಿದ್ದಾರೆಂದು ತಪ್ಪು ತಿಳಿದು ಶುಭಾಶಯ ತಿಳಿಸಿದವರೂ ಇದ್ದಾರೆ. ಅದೇ ರೀತಿ ಎಡಿಜಿಪಿ ಭಾಸ್ಕರ್ ರಾವ್​ ಕೂಡ ತಪ್ಪು ತಿಳಿದು ಟ್ವೀಟ್ ಮಾಡಿದ್ದರು. ಪ್ರಿಯಾ ಒಲಿಂಪಿಕ್ಸ್​ನಲ್ಲಿ ಗೆದ್ದಿದ್ದಾರೆ ಎನ್ನುವ ಬರಹವಿದ್ದ ಫೋಟೋವೊಂದನ್ನು ಹಂಚಿಕೊಂಡು ಅವರಿಗೆ ಶುಭಾಶಯ ತಿಳಿಸಿದ್ದರು.

    ಶುಭಾಶಯ ಕೋರುವ ಧಾವಂತದಲ್ಲಿ ಎಡಿಜಿಪಿ ಭಾಸ್ಕರ್ ರಾವ್ ಯಡವಟ್ಟು

    ಆದರೆ ಅದು ತಪ್ಪು ಎಂದು ತಿಳಿಯುತ್ತಿದ್ದಂತೆ ಭಾಸ್ಕರ್ ರಾವ್ ಜನರಲ್ಲಿ ಕ್ಷಮೆ ಯಾಚಿಸಿದ್ದಾರೆ. ನಾನು ಟ್ವೀಟ್ ಮಾಡುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಬೇಕಿತ್ತು. ಅದೇನೇ ಇರಲಿ, ಒಲಿಂಪಿಕ್ಸ್​ನಲ್ಲಿರುವ ನಮ್​ ಟೀಂಗೆ ಶುಭವಾಗಲಿ ಎಂದು ಅವರು ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ.

    ಜಪಾನ್​ ಯುವತಿಯ ಭಾರತ ಪ್ರೀತಿ: ಹಿಂದಿಯಲ್ಲೇ ಮಾತನಾಡೋ ಬೆಡಗಿಗೆ ಪಾನಿಪುರಿ ಇಷ್ಟವಂತೆ

    #BBK8: ಬಿಗ್​ಬಾಸ್ ಮನೆಯಲ್ಲಿ ಇಂದು ಎಲಿಮಿನೇಟ್ ಆದವರು ಇವರೇ.. ಮನೆ ಮಂದಿಗೆ ಶಾಕ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts