ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ ವ್ಯಾಪಾರಿಯಾಗಿರುವ ಸುಬ್ರತಾ ಸರ್ಕಾರ್ ಎಂಬಾತ ಬೈಕ್ ಖರೀದಿಸಬೇಕೆಂಬ ಹಲವು ವರ್ಷಗಳ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಸತತ ಆರು ವರ್ಷಗಳಿಂದ ಸಂಗ್ರಹಿಸಿದ್ದ 2 ರೂ. ನಾಣ್ಯಗಳನ್ನೇ ನೀಡಿ 1.8 ಲಕ್ಷ ರೂ.ಬೆಲೆಯ ಬೈಕ್ ಖರೀದಿಸಿದ್ದಾರೆ. 2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಬಳಿಕ ನೋಟು ಅಭಾವದಿಂದಾಗಿ ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್ ಖರೀದಿಸಿದ್ದಾರೆ.
ಚಿಲ್ಲರೆ ವ್ಯಾಪಾರಿಯಾಗಿರುವ ಸುಬ್ರತ ಸರ್ಕಾರ್ಗೆ ನೋಟು ನಿಷೇಧ ಬಳಿಕ ಬರೀ ನಾಣ್ಯಗಳ ಚಲಾವಣೆಯೇ ಹೆಚ್ಚಿತಂತೆ. ಇದಕ್ಕಾಗಿಯೇ ತಾನು ನಾಣ್ಯಗಳನ್ನೇ ಸಂಗ್ರಹಿಸಿ ಬೈಕ್ ಖರೀದಿಸಬೇಕೆಂದು ಅಂದೇ ಪಣ ತೊಟ್ಟಿದ್ದರು. ಅಂತೆಯೇ ನಾಣ್ಯಗಳಿಂದಲೇ ಬೈಕ್ ಖರೀದಿಸಿದ್ದಾರೆ.
ಚೀಲಗಳಲ್ಲಿ ತುಂಬಿಕೊಂಡು ಶೋ ರೂಂಗೆ ಬಂದಿದ್ದ ಸರ್ಕಾರ್ನನ್ನು ನೋಡಿ ಗಾಬರಿಯಾದ ಸಿಬ್ಬಂದಿ ನಂತರ ಬೈಕ್ ಖರೀದಿಗೆ ಬಂದಿರುವುದಾಗಿ ತಿಳಿಸಿದ್ದಾರೆ. ಈತ ನೀಡಿದ್ದ ನಾಣ್ಯಗಳನ್ನು ಎಣಿಸುವಷ್ಟರಲ್ಲಿ ಸಿಬ್ಬಂದಿಗೆ ಸಾಕಾಗಿ ಹೋಯಿತು. ಕೊನೆಗೂ ಈ ವ್ಯಾಪಾರಿಯ ಕನಸು ನೆರವೇರಿತು. (ಏಜೆನ್ಸೀಸ್)
ಲಲಿತ್ ಮೋದಿ ಜತೆಗೆ ಸುಷ್ಮಿತಾ ಡೇಟಿಂಗ್: ಮಾಜಿ ಪ್ರಿಯಕರನಿಂದ ಅಚ್ಚರಿಯ ಹೇಳಿಕೆ!