ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ ವೀಕ್ಷಕರ ಗಮನವನ್ನು ಸೆಳೆಯುತ್ತಿದ್ದು, ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವ ಸ್ಪರ್ಧಿಗಳಿಗೆ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಟ, ನಿರೂಪಕ ಸುದೀಪ್ ಸ್ಪರ್ಧಿಗಳಿಗೆ ಹೆಚ್ಚು ನಗದೆ, ಖಡಕ್ ಮಾತಿನಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ಐಷಾರಾಮಿ ಹೊಸ ಮನೆ ಪ್ರವೇಶಿಸಿದ ನಟಿ ಕಾಜಲ್ ಅಗರ್ವಾಲ್; ‘ಗೃಹ ಪ್ರವೇಶ’ ದ ಪೋಟೋ ಶೇರ್
ಶನಿವಾರ ನಡೆದ ‘ವಾರದ ಕಥೆ ಕಿಚ್ಚನ ಜತೆ’ ಕಾರ್ಯಕ್ರಮದಲ್ಲಿ ಎಂದಿನಂತೆ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುವಂತೆಯೇ ಈ ವಾರವೂ ಕೂಡ ಕಾಣಿಸಿಕೊಂಡ ಸುದೀಪ್, ಮನೆಯ ಸ್ಪರ್ಧಿಗಳೊಡನೆ ಟಾಸ್ಕ್ ವಿಷಯ ಚರ್ಚಿಸಿದರು. ಎಲ್ಲಿಯೂ ಕೂಡ ಹೆಚ್ಚು ಸ್ಮೈಲ್ ಮಾಡದೆ, ಮನೆಯವರೊಡನೆ ತಮಾಷೆ ಮಾಡದ ಕಿಚ್ಚ ದಸರಾ ಹಬ್ಬದ ಉಡುಗೊರೆ ಬೇಡವೇ ಎಂದು ಕೇಳಿದರು.
ಇದಕ್ಕೆ ಬೇಕು ಎಂದ ಸ್ಪರ್ಧಿಗಳಿಗೆ ಜನಾಭಿಪ್ರಾಯಗಳಿಂದ ನೇರವಾಗಿ ಬಂದಿದ್ದ ವಿಶೇಷ ಗಿಫ್ಟ್ ಅನ್ನು ಸುದೀಪ್ ಒಬ್ಬೊಬ್ಬರಿಗೂ ತೆಗೆದು ಅನಾವರಣಗೊಳಿಸುವಂತೆ ಹೇಳಿದರು.
ಇದನ್ನೂ ಓದಿ: ಮಹಿಳೆ ಮೇಲೆ ಡೆಲಿವರಿ ಬಾಯ್ ಅತ್ಯಾಚಾರ: ಪೊಲೀಸ್ ಫೈರಿಂಗ್- ಆರೋಪಿ ಅರೆಸ್ಟ್
ವಸ್ತುಗಳ ಮುಖೇನ ವೀಕ್ಷಕರು ತಮ್ಮ ಅಭಿಪ್ರಾಯವನ್ನು ಪತ್ರದಲ್ಲಿ ಬರೆದು ಆಯಾ ಸ್ಪರ್ಧಿಗಳಿಗೆ ಮನವರಿಕೆಯಾಗುವಂತೆ ಕಳಿಸಿಕೊಟ್ಟಿದ್ದರು. ಅರ್ಥವಾಗದ ಸಂದೇಶಗಳನ್ನು ಸುದೀಪ್ ತಿಳಿ ಹೇಳಿ, ಅರ್ಥೈಸಿದರು. ಶನಿವಾರದ ಪಂಚಾಯತಿ ಕಟ್ಟೆಯಲ್ಲಿ ಮೂಡದ ತಮಾಷೆ ಇದೀಗ ಭಾನುವಾರದ ಸೂಪರ್ ಸಂಡೆ ವಿತ್ ಸುದೀಪ್ ಸಂಚಿಕೆಯಲ್ಲಿ ಜಬರ್ದಸ್ತ್ ಆಗಿ ನಡೆದಿದೆ.
ವೀಕ್ಷಕರಿಂದ ಮೈಕ್ ಅನ್ನು ಉಡುಗೊರೆಯಾಗಿ ಪಡೆದುಕೊಂಡ ತುಕಾಲಿ ಸಂತೋಷ್ಗೆ ಸುದೀಪ್, ಮೈಕ್ ಹಿಡಿದು ಒಬ್ಬೊಬ್ಬ ಸ್ಪರ್ಧಿಗಳ ಮನದಾಳದ ಮಾತುಗಳನ್ನು ಹೇಳಲು ಹೇಳಿದರು. ಇದಕ್ಕೆ ಸಂತು ಕೊಟ್ಟ ಉತ್ತರಗಳು ಸುದೀಪ್ ಜತೆಗೆ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲಿಸಿದೆ. ಈ ಭರಪೂರ ಮನರಂಜನೆಯನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬೇಕಿದೆ.
ಇದನ್ನೂ ಓದಿ: 73 ವರ್ಷದ ತಾಯಿಯನ್ನು ಥಳಿಸಿದ ವಕೀಲ; ಮಗನ ಕೃತ್ಯಕ್ಕೆ ಸಾಥ್ ನೀಡಿದ ಸೊಸೆ, ಮಗ ಅರೆಸ್ಟ್
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.
‘ಕೆಂಡ’ದೊಳಗಿವೆ ಬೆಂಕಿನುಂಡೆಯಂತ ಪಾತ್ರಗಳು; ಮತ್ತೊಂದು ವಿಶಿಷ್ಟ ಸಿನಿಮಾ ಕೊಡಲು ‘ಗಂಟುಮೂಟೆ’ ಟೀಂ ಸಜ್ಜು!