More

    BBKS10: ‘ಅವನೊಬ್ಬ ಮಹಾನ್​ ಸಾಧಕ’ ಎಂದ ತುಕಾಲಿ ಸಂತೋಷ್; ಅಷ್ಟಕ್ಕೂ​ ಹೇಳಿದ್ಯಾರಿಗೆ?

    ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಇದೀಗ ವೀಕ್ಷಕರ ಗಮನವನ್ನು ಸೆಳೆಯುತ್ತಿದ್ದು, ನಾಲ್ಕನೇ ವಾರಕ್ಕೆ ಕಾಲಿಡುತ್ತಿರುವ ಸ್ಪರ್ಧಿಗಳಿಗೆ ವಾರಾಂತ್ಯದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಟ, ನಿರೂಪಕ ಸುದೀಪ್​ ಸ್ಪರ್ಧಿಗಳಿಗೆ ಹೆಚ್ಚು ನಗದೆ, ಖಡಕ್​ ಮಾತಿನಲ್ಲೇ ಕ್ಲಾಸ್​ ತೆಗೆದುಕೊಂಡಿದ್ದಾರೆ.

    ಇದನ್ನೂ ಓದಿ: ಐಷಾರಾಮಿ ಹೊಸ ಮನೆ ಪ್ರವೇಶಿಸಿದ ನಟಿ ಕಾಜಲ್​ ಅಗರ್ವಾಲ್; ‘ಗೃಹ ಪ್ರವೇಶ’ ದ ಪೋಟೋ ಶೇರ್​

    ಶನಿವಾರ ನಡೆದ ‘ವಾರದ ಕಥೆ ಕಿಚ್ಚನ ಜತೆ’ ಕಾರ್ಯಕ್ರಮದಲ್ಲಿ ಎಂದಿನಂತೆ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಳ್ಳುವಂತೆಯೇ ಈ ವಾರವೂ ಕೂಡ ಕಾಣಿಸಿಕೊಂಡ ಸುದೀಪ್​, ಮನೆಯ ಸ್ಪರ್ಧಿಗಳೊಡನೆ ಟಾಸ್ಕ್​ ವಿಷಯ ಚರ್ಚಿಸಿದರು. ಎಲ್ಲಿಯೂ ಕೂಡ ಹೆಚ್ಚು ಸ್ಮೈಲ್​ ಮಾಡದೆ, ಮನೆಯವರೊಡನೆ ತಮಾಷೆ ಮಾಡದ ಕಿಚ್ಚ ದಸರಾ ಹಬ್ಬದ ಉಡುಗೊರೆ ಬೇಡವೇ ಎಂದು ಕೇಳಿದರು.

    ಇದಕ್ಕೆ ಬೇಕು ಎಂದ ಸ್ಪರ್ಧಿಗಳಿಗೆ ಜನಾಭಿಪ್ರಾಯಗಳಿಂದ ನೇರವಾಗಿ ಬಂದಿದ್ದ ವಿಶೇಷ ಗಿಫ್ಟ್​ ಅನ್ನು ಸುದೀಪ್​ ಒಬ್ಬೊಬ್ಬರಿಗೂ ತೆಗೆದು ಅನಾವರಣಗೊಳಿಸುವಂತೆ ಹೇಳಿದರು.

    ಇದನ್ನೂ ಓದಿ: ಮಹಿಳೆ ಮೇಲೆ ಡೆಲಿವರಿ ಬಾಯ್ ಅತ್ಯಾಚಾರ: ಪೊಲೀಸ್ ಫೈರಿಂಗ್​- ಆರೋಪಿ ಅರೆಸ್ಟ್​

    ವಸ್ತುಗಳ ಮುಖೇನ ವೀಕ್ಷಕರು ತಮ್ಮ ಅಭಿಪ್ರಾಯವನ್ನು ಪತ್ರದಲ್ಲಿ ಬರೆದು ಆಯಾ ಸ್ಪರ್ಧಿಗಳಿಗೆ ಮನವರಿಕೆಯಾಗುವಂತೆ ಕಳಿಸಿಕೊಟ್ಟಿದ್ದರು. ಅರ್ಥವಾಗದ ಸಂದೇಶಗಳನ್ನು ಸುದೀಪ್​ ತಿಳಿ ಹೇಳಿ, ಅರ್ಥೈಸಿದರು. ಶನಿವಾರದ ಪಂಚಾಯತಿ ಕಟ್ಟೆಯಲ್ಲಿ ಮೂಡದ ತಮಾಷೆ ಇದೀಗ ಭಾನುವಾರದ ಸೂಪರ್​ ಸಂಡೆ ವಿತ್​ ಸುದೀಪ್​ ಸಂಚಿಕೆಯಲ್ಲಿ ಜಬರ್​ದಸ್ತ್​ ಆಗಿ ನಡೆದಿದೆ.

    ವೀಕ್ಷಕರಿಂದ ಮೈಕ್​ ಅನ್ನು ಉಡುಗೊರೆಯಾಗಿ ಪಡೆದುಕೊಂಡ ತುಕಾಲಿ ಸಂತೋಷ್​ಗೆ ಸುದೀಪ್​, ಮೈಕ್​ ಹಿಡಿದು ಒಬ್ಬೊಬ್ಬ ಸ್ಪರ್ಧಿಗಳ ಮನದಾಳದ ಮಾತುಗಳನ್ನು ಹೇಳಲು ಹೇಳಿದರು. ಇದಕ್ಕೆ ಸಂತು ಕೊಟ್ಟ ಉತ್ತರಗಳು ಸುದೀಪ್​ ಜತೆಗೆ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲಿಸಿದೆ. ಈ ಭರಪೂರ ಮನರಂಜನೆಯನ್ನು ಇಂದಿನ ಸಂಚಿಕೆಯಲ್ಲಿ ವೀಕ್ಷಿಸಬೇಕಿದೆ.

    ಇದನ್ನೂ ಓದಿ: 73 ವರ್ಷದ ತಾಯಿಯನ್ನು ಥಳಿಸಿದ ವಕೀಲ; ಮಗನ ಕೃತ್ಯಕ್ಕೆ ಸಾಥ್​​ ನೀಡಿದ ಸೊಸೆ, ಮಗ ಅರೆಸ್ಟ್​​ 

    ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

    ‘ಕೆಂಡ’ದೊಳಗಿವೆ ಬೆಂಕಿನುಂಡೆಯಂತ ಪಾತ್ರಗಳು; ಮತ್ತೊಂದು ವಿಶಿಷ್ಟ ಸಿನಿಮಾ ಕೊಡಲು ‘ಗಂಟುಮೂಟೆ’ ಟೀಂ ಸಜ್ಜು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts