ಬೆಂಗಳೂರು: ರೈಲ್ವೇ ನಕಲಿ ಟಿಕೆಟ್ ಮಾರಾಟ ಮಾಡುತ್ತಿದ್ದವನನ್ನು ಬಂಧಿಸಿ ಬಳಿಕ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ಶಂಕೆ ವ್ಯಕ್ತವಾಗಿದೆ.
ಗುಲಾಮ ಮುಸ್ತಾಪ್ ಬಂಧಿತ ಆರೋಪಿ, ಎಎನ್ಎಂಎಸ್ ಸಾಫ್ಟ್ವೇರ್ ಹ್ಯಾಕ್ ಮಾಡಿ 563 ನಕಲಿ ಐಡಿ ಸಿದ್ಧಪಡಿಸಿಕೊಂಡಿದ್ದ. ನಕಲಿ ಐಡಿಗಳಿಂದ ರೈಲ್ವೆ ಇಲಾಖೆಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾನೆ.
ಪಾಕಿಸ್ತಾನ ಮೂಲದ ಡಾರ್ಕ್ ನೆಟ್ ಬಳಸಿ ಹ್ಯಾಕಿಂಗ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಕೇಂದ್ರ ಸರ್ಕಾರದ ವೆಬ್ಸೈಟ್ ವಿವರ, ಬ್ಯಾಂಕ್ ಖಾತೆಗಳ ವಿವರ ಮತ್ತು ಇನ್ನಿತರ ಸಾಫ್ಟ್ವೇರ್ಗಳ ಮಾಹಿತಿಯನ್ನು ಕಾಪಿ ಮಾಡಿ ಇಟ್ಟುಕೊಂಡಿದ್ದಾನೆ. ನಿಷೇಧಿತ ಜಾಲತಾಣಗಳ ಜೊತೆ ಸಂಪರ್ಕ ಹೊಂದಿದ್ದ ಆರೋಪಿ, ಮುಸ್ತಾಫಾ, ಜಾರ್ಖಂಡ್ನ ಡಾಲಾಂಗಿ ಮೂಲದವನು.
ರಾಜಗೋಪಾಲ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ಪೊಲೀಸರು, ನ್ಯಾಯಾಲಯಕ್ಕೆ ಹಾಜರು ಪಡಿಸಿ ಹತ್ತು ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಆರೋಪಿ ಮುಸ್ತಾಫ ಬಳಿಯಿದ್ದ ಲ್ಯಾಪ್ಟಾಪ್ನಲ್ಲಿ ಡಾರ್ಕ್ ನೆಟ್ ವೆಬ್ ಸೈಟ್ ಪತ್ತೆಯಾಗಿದೆ. ಪತ್ತೆಯಾದ ವೆಬ್ಸೈಟ್ ಮುಖಾಂತರ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶಗಳ ಜತೆ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರದ ಕೆಲ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿದ್ದು, ಈ ಮೂಲಕ ಸೈಬರ್ ಉಗ್ರ ಕೃತ್ಯದಲ್ಲಿ ಮುಂದಾಗಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸರ್ಕಾರಿ ವೆಬ್ಸೈಟ್ ಹ್ಯಾಕ್ ಮಾಡಿ, ಉಗ್ರರಿಗೆ ಮಾಹಿತಿ ಹಂಚಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಡಿಜಿಟಲ್ ಫುಟ್ಪ್ರಿಂಟ್ಗಳನ್ನು ಸೈಬರ್ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಒಡಿಶಾದ ಜಿಲ್ಲೆಗಳಲ್ಲಿ ವಿದ್ವಂಸಕ ಕೃತ್ಯಗಳ ಎಸಗಿದವರ ಜತೆ ಸಂಪರ್ಕ ಹೊಂದಿರುವ ಬಗ್ಗೆಯೂ ತನಿಖೆ ಮನಡೆಸಲಾಗುತ್ತಿದೆ. ಇದೇ ವೇಳೆ ಲ್ಯಾಪ್ಟಾಪ್ನಲ್ಲಿ ಇಸ್ರೋ ನ ಕೆಲ ಮಾಹಿತಿಗಳು ಪತ್ತೆಯಾಗಿವೆ. ಕಾರ್ಟೋ ಸ್ಯಾಟನ್ ಬಗ್ಗೆ ಸರ್ಚ್ ಮಾಡಿದ್ದ ಆರೋಪಿ, ಕೆಲ ಮಾಹಿತಿ ಡೌನ್ ಲೋಡ್ ಮಾಡಿಕೊಂಡಿದ್ದ. ಅಲ್ಲದೆ, ಹಲವು ಮದರಸಾಗಳಿಗೆ ಭೇಟಿ ನೀಡಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. (ದಿಗ್ವಿಜಯ ನ್ಯೂಸ್)