ಲಖನೌ: ದೇಶದ ಗಮನಸೆಳೆದ ಬಾಬರಿ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆಯ ಉಳಿದ ಭಾಗವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂದುವರಿಸಲುಯ ವಿಶೇಷ ಸಿಬಿಐ ಕೋರ್ಟ್ ನಿರ್ಧರಿಸಿದೆ. ಬಾಬರಿ ಕಟ್ಟಡ ಧ್ವಂಸ ಪ್ರಕರಣ 1992ರಲ್ಲಿ ನಡೆದಿದ್ದು, ಅದರ ವಿಚಾರಣೆ ಇನ್ನೂ ಮುಂದುವರಿದಿದೆ.
ಇದನ್ನೂ ಓದಿ: ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಬೇಗ ಮುಗಿಸಿ: ಸುಪ್ರೀಂ ಕೋರ್ಟ್ ಆದೇಶ
ಈ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31ರ ಒಳಗೆ ಮುಗಿಸುವಂತೆ ಸ್ಪೆಷಲ್ ಕೋರ್ಟ್ಗೆ ಸುಪ್ರೀಂ ಕೋರ್ಟ್ ಮೇ 8ರಂದು ನಿರ್ದೇಶಿಸಿತ್ತು. ಇದಕ್ಕೂ ಮುನ್ನ, ಏಪ್ರಿಲ್ 20ರೊಳಗೆ ವಿಚಾರಣೆ ಮುಗಿಯಬೇಕು ಎಂಬ ಗಡುವನ್ನು ನಿಗದಿ ಮಾಡಲಾಗಿತ್ತು. ಆದರೆ, ಕೋವಿಡ್ 19 ವೈರಸ್ ಸೋಂಕು ವ್ಯಾಪಿಸಿ ಲಾಕ್ಡೌನ್ ಘೋಷಣೆಯಾದ ಕಾರಣ ಈ ಗಡುವಿನೊಳಗೆ ವಿಚಾರಣೆ ಪೂರ್ಣಗೊಂಡಿಲ್ಲ.
ಇದನ್ನೂ ಓದಿ: ಒಂದು ಹಾವು ಕಚ್ಚಿದ್ರೂ ಬಚಾವ್, ಆದ್ರೆ ಮತ್ತೊಂದು ಬೆಡ್ರೂಮ್ಗೇ ನುಗ್ಗಿತ್ತು..
ಬಿಜೆಪಿ ನಾಯಕರಾದ ಎಲ್.ಕೆ.ಆಡ್ವಾಣಿ, ಮುರಳಿಮನೋಹರ ಜೋಷಿ, ಸಾಧ್ವಿ ಉಮಾಭಾರತಿ, ವಿಶ್ವಹಿಂದು ಪರಿಷದ್ ನಾಯಕ ಚಂಪತ್ ರಾಯ್ ಬನ್ಸಾಲ್ ಮತ್ತು ಇತರರು ಈ ಪ್ರಕರಣದ ಪ್ರಮುಖ ಆರೋಪಿಗಳು. ಸಿಬಿಐ ದಾಖಲಿಸಿದ ವಿಚಾರಣಾ ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿಕೊಂಡಿದೆ. ಇನ್ನು, ಆರೋಪಿಗಳ ವಿರುದ್ಧ ಇರುವಂತಹ ಸಾಕ್ಷ್ಯಗಳು ಏನೇನು, ಆರೋಪಗಳೇನು ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯುತ್ತಿದೆ.
ಇದನ್ನೂ ಓದಿ: ಸೆಕೆಂಡ್ ಪಿಯು ವಿದ್ಯಾರ್ಥಿಗಳ ಗಮನಕ್ಕೆ- ಇಂಗ್ಲಿಷ್ ಪರೀಕ್ಷೆ ನೀವಿರುವ ಜಿಲ್ಲೆಯಿಂದಲೇ ಬರೀತೀರಾ? – ಈ ಸುದ್ದಿ ಓದಿ..
ಇದೇ ವೇಳೆ, ಪ್ರತಿವಾದಿಗಳ ಕಡೆಯಿಂದ ಕೋರ್ಟ್ಗೆ ಶುಕ್ರವಾರ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಮೂವರು ಸಾಕ್ಷಿಗಳನ್ನು ಪಾಟೀ ಸವಾಲಿಗೆ ಒಳಪಡಿಸುವಂತೆ ಕೋರಲಾಗಿದೆ. ಈ ಸಾಕ್ಷಿಗಳು 2016-17ರಲ್ಲಿ ಸಾಕ್ಷ್ಯ ನುಡಿದಿದ್ದರು. ಅಂದು ಅವರನ್ನು ಪಾಟೀ ಸವಾಲಿಗೆ ಒಳಪಡಿಸಲಾಗಿರಲಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್, ಈ ವಿಚಾರಣಾ ಸಾಕ್ಷಿಗಳನ್ನು ಪಾಟೀಸವಾಲಿಗೆ ಒಳಪಡಿಸಲು ಬೇಕಾದ ಪ್ರಶ್ನೆಗಳ ಪಟ್ಟಿಯನ್ನು ಒದಗಿಸುವಂತೆ ಪ್ರತಿವಾದಿಗಳಿಗೆ ಸೂಚಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆ ಮೇ 18ರಂದು ನಡೆಯಲಿದೆ. (ಏಜೆನ್ಸೀಸ್)