ಕೊಕಟನೂರ: ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಥಣಿ ತಾಲೂಕಿಗೆ ಕಳೆದ ಒಂದು ವಾರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದಾರೆ. ಅವರಲ್ಲಿ ಕೆಲವರನ್ನು ಆಯಾ ಗ್ರಾಮದ ಶಾಲೆಗಳಲ್ಲಿ ಹಾಗೂ ಉಳಿದವರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಬಂಗಾರೆಪ್ಪನವರ ತಿಳಿಸಿದರು.
ಜಾರ್ಖಂಡ್ನ ಸಿಕ್ರಜ್ಗೆ ಹೋಗಿಬಂದ 16 ಜನರನ್ನು ನಂದಗಾಂವ ಗ್ರಾಮದ ಹಳಿಂಗಳಿ ತೋಟದ ವಸತಿ ಪ್ರದೇಶದ ಶಾಲೆಯಲ್ಲಿ, ಬೆಂಗಳೂರಿನಿಂದ ಬಳವಾಡಕ್ಕೆ ಬಂದ 10 ಜನರನ್ನು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತ್ತು ದೆಹಲಿಗೆ ಹೋಗಿಬಂದ ಕಟಗೇರಿ ಗ್ರಾಮದ ಓರ್ವನನ್ನು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇರಿಸಲಾಗಿದೆ. ಅಲ್ಲದೇ ಇದೇ ತರಹ ತಾಲೂಕಿನ ಹಲವು ಗ್ರಾಮಗಳಿಗೆ ಹೊರಗಿನಿಂದ ಬಂದವರನ್ನು ಕ್ವಾರಂಟೈನ್ನಲ್ಲಿ ಇಡಲಾಗಿದೆ.
ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಮೇಲೆ ನಿಗಾಯಿಟ್ಟಿದ್ದಾರೆ. ಗ್ರಾಪಂನಿಂದ ಅವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಅವರ ಹತ್ತಿರ ಯಾರೂ ಹೋಗದಂತೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ ಎಂದು ತಿಳಿಸಿದರು.