ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಇಂದು ಕೂಡ ಹಾಜರಾಗದಿರಲು ನಿರ್ಧರಿಸಿದ್ದಾರೆ. ಈ ಮೂಲಕ ಸತತ 5ನೇ ಬಾರಿಗೆ ವಿಚಾರಣೆಯಿಂದ ತಪ್ಪಿಸಿಕೊಂಡಿದ್ದಾರೆ. ದೆಹಲಿಯ ಅಬಕಾರಿ ನೀತಿ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ ಕೇಜ್ರಿವಾಲ್ಗೆ ಸಮನ್ಸ್ ನೀಡಿದೆ.
ಪದೇಪದೆ ಸಮನ್ಸ್ ನೀಡುತ್ತಿರುವುದು ಕೇಜ್ರಿವಾಲ್ ಅವರನ್ನು ಬಂಧಿಸುವ ಪ್ರಯತ್ನಗಳಾಗಿವೆ ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಕಳೆದ ನಾಲ್ಕು ತಿಂಗಳುಗಳಲ್ಲಿ ಏಜೆನ್ಸಿ ನೀಡಿದ ನಾಲ್ಕು ಸಮನ್ಸ್ಗೆ ಕೇಜ್ರಿವಾಲ್ ಯಾವುದೇ ಉತ್ತರ ನೀಡಿಲ್ಲ. ಬುಧವಾರ ಐದನೇ ಸಮನ್ಸ್ ನೀಡಲಾಗಿದ್ದು, ಇದು ಕಾನೂನುಬಾಹಿರ ಎಂದು ದೆಹಲಿ ಸಿಎಂ ಸಮರ್ಥನೆ ನೀಡಿದ್ದಾರೆ.
ಇಡಿ ಸಮನ್ಸ್ ಕೇಜ್ರಿಬಾಲ್ ಅವರನ್ನು ಬಂಧಿಸುವ ಮೋದಿಜಿ ಅವರ ಗುರಿಯಾಗಿದೆ. ಬಂಧಿಸುವ ಮೂಲಕ ದೆಹಲಿ ಸರ್ಕಾರವನ್ನು ಉರುಳಿಸಲು ಮೋದಿ ಬಯಸಿದ್ದಾರೆ. ಆದರೆ, ಈ ರೀತಿ ನಡೆಯುವುದಕ್ಕೆ ಎಂದಿಗೂ ಬಿಡುವುದಿಲ್ಲ ಎಂದು ಎಎಪಿ ಸವಾಲು ಹಾಕಿದೆ.
2023ರಲ್ಲಿ ನವೆಂಬರ್ 2 ಮತ್ತು ಡಿಸೆಂಬರ್ 21ರಂದು ವಿಚಾರಣೆಗೆ ಗೈರು ಹಾಜರಾದ ಕೇಜ್ರಿವಾಲ್, ಈ ವರ್ಷ ಜನವರಿ 3 ಮತ್ತು ಜನವರಿ 18ರಂದು ಇಡಿ ವಿಚಾರಣೆ ತಪ್ಪಿಸಿಕೊಂಡಿದ್ದಾರೆ.
ಜಾರಿ ನಿರ್ದೇಶನಾಲಯದ ಪ್ರಕಾರ, 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯು ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ಕಾರ್ಟೆಲೈಸೇಶನ್ಗೆ ಅವಕಾಶ ಮಾಡಿಕೊಟ್ಟಿತು ಮತ್ತು ಲಂಚ ನೀಡಿದ ಕೆಲವು ವಿತರಕರಿಗೆ ಅನುಕೂಲವಾಯಿತು ಎಂದು ಆರೋಪಿಸಿದ್ದು, ತನಿಖೆ ಮುಂದುವರಿಸಿದೆ. (ಏಜೆನ್ಸೀಸ್)
ಲೋಕ ಸಮರ 2024: ಸಕ್ಕರೆ ನಾಡಲ್ಲಿ ನಿಖಿಲ್ ಸ್ಪರ್ಧೆ ಫಿಕ್ಸಾ? ಅಖಾಡಕ್ಕೆ ರಮ್ಯಾ? ಸುಮಲತಾ ಕಥೆ ಏನು?
ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಅಮೆರಿಕ ನಂ. 1: ಭಾರತಕ್ಕೆ ಎಷ್ಟನೇ ಸ್ಥಾನ?