ಲೋಕ ಸಮರ 2024: ಸಕ್ಕರೆ ನಾಡಲ್ಲಿ ನಿಖಿಲ್​ ಸ್ಪರ್ಧೆ ಫಿಕ್ಸಾ? ಅಖಾಡಕ್ಕೆ ರಮ್ಯಾ? ಸುಮಲತಾ ಕಥೆ ಏನು?

ಮಂಡ್ಯ ಎಂದರೆ ಇಂಡಿಯಾದೆಲ್ಲೆಡೆ ಸದ್ದು ಜೋರಾಗಿರುತ್ತದೆ. ಅದರಲ್ಲಿಯೂ ರಾಜಕೀಯ ವಿಷಯಕ್ಕೆ ಬಂದರೆ ವರ್ಣರಂಜಿತ, ಊಹೆಗೂ ಮೀರಿದ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಜಿಲ್ಲೆಯಾಗಿದೆ. ಗ್ರಾಮ ಪಂಚಾಯಿತಿ ಹಿಡಿದು ಲೋಕಸಭೆ ಚುನಾವಣೆವರೆಗೂ ಜಿದ್ದಾಜಿದ್ದಿ ಕದನ ನಡೆಯುತ್ತದೆ.ಇತ್ತೀಚಿನ ವರ್ಷಗಳಲ್ಲಿ ಪ್ರತಿಷ್ಠೆಯ ಮೇಲಾಟ ಜೋರಾಗಿದೆ. ಅದರಲ್ಲೂ ಘಟಾನುಘಟಿ ರಾಜಕಾರಣಿಗಳಿಗೂ ಸೋಲಿನ ರುಚಿ ತೋರಿಸಿರುವ ಉದಾಹರಣೆ ಸಾಕಷ್ಟಿವೆ. ಈಗಾಗಲೇ 20 ಲೋಕಸಭಾ ಚುನಾವಣೆಗಳನ್ನು ಕಂಡಿರುವ ಜಿಲ್ಲೆಯ ಜನರು ಮತ್ತೊಂದು ಚುನಾವಣೆಯಲ್ಲಿ ರಾಜಕಾರಣಿಗಳ ಹಣೆಬರಹ ಬರೆಯಲು ಸಜ್ಜಾಗುತ್ತಿದ್ದಾರೆ. ಮಂಡ್ಯ ಲೋಕಸಭಾ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು * ಮಂಡ್ಯ … Continue reading ಲೋಕ ಸಮರ 2024: ಸಕ್ಕರೆ ನಾಡಲ್ಲಿ ನಿಖಿಲ್​ ಸ್ಪರ್ಧೆ ಫಿಕ್ಸಾ? ಅಖಾಡಕ್ಕೆ ರಮ್ಯಾ? ಸುಮಲತಾ ಕಥೆ ಏನು?