ಚಿಕ್ಕಮಗಳೂರು: ಆನೆಗಳ ಹಿಂಡು, ಚಿರತೆ, ಕರಡಿ ಕಾಡಿನಿಂದ ನಾಡಿಗೆ ಬಂದು ಹಾವಳಿ ಇಡುತ್ತಿರುವ ಪ್ರಕರಣಗಳ ನಡುವೆ ಇದೀಗ ಕಾಡುಕೋಣಗಳ ಹಿಂಡು ಕಾಫಿ ಎಸ್ಟೇಟ್ವೊಂದರಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭೂತನಕಾಡು ಎಂಬಲ್ಲಿನ ಕಾಫಿ ಎಸ್ಟೇಟ್ನಲ್ಲಿ ಈ ಕಾಡುಕೋಣಗಳ ಹಿಂಡು ಕಾಣಿಸಿಕೊಂಡಿದೆ. ಒಂದೇ ಕಡೆಯಲ್ಲಿ ಸುಮಾರು 50 ಕಾಡುಕೋಣಗಳು ಕಾಣಿಸಿಕೊಂಡಿದ್ದು, ಬೆಳೆಗಾರರು ಆತಂಕಗೊಂಡಿದ್ದಾರೆ.
ಸಿದ್ದಗಂಗಾ ಕಾಫಿ ಎಸ್ಟೇಟ್ನಲ್ಲಿ ಕಾಣಿಸಿಕೊಂಡ ಕಾಡುಕೋಣಗಳಿಂದಾಗಿ ಕಾರ್ಮಿಕರು ಆತಂಕಗೊಂಡಿದ್ದಾರೆ. ಮಾತ್ರವಲ್ಲ ಕಾಡುಕೋಣಗಳ ಓಡಾಟದಿಂದ ತೋಟದಲ್ಲಿ ಕಾಫಿ ಹಾಗೂ ಮೆಣಸು ಬೆಳೆಗಳಿಗೆ ಹಾನಿಯಾಗಿವೆ. ಅವುಗಳನ್ನು ಕಾಡಿಗೆ ಮರಳಿಸುವ ಪ್ರಯತ್ನಗಳೂ ನಡೆಯುತ್ತಿವೆ.
ವಿಚಾರಣಾಧೀನ ಕೈದಿಯ ಅನುಮಾನಾಸ್ಪದ ಸಾವು; ಕೋಲ್ಕತ ಮೂಲದ ರೂಪದರ್ಶಿ ಕೊಲೆ ಪ್ರಕರಣದ ನಾಗೇಶ್ ಇನ್ನಿಲ್ಲ
ಹುಟ್ಟುತ್ತಲೇ ತಾಯಿಯನ್ನು ಕಳೆದುಕೊಂಡ ಮಗ; ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಸಂಬಂಧಿಕರ ಆರೋಪ, ಪ್ರತಿಭಟನೆ