ಕಳೆದ ತಿಂಗಳು ಆತ್ಮಹತ್ಯೆಯಿಂದ ನಿಧನರಾದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ಗೆ ದೊಡ್ಡ ಬ್ರೇಕ್ ನೀಡಿದ್ದು ಕಿರುತೆರೆಯಲ್ಲಿ ಪ್ರಸಾರವಾದ ‘ಪವಿತ್ರ ರಿಶ್ತಾ’ ಧಾರಾವಾಹಿ. ಈ ಧಾರಾವಾಹಿಯಿಂದಲೇ ಸುಶಾಂತ್ ಅವರನ್ನು ನಾಲ್ಕು ಜನ ಗುರುತಿಸಿದ್ದು ಮತ್ತು ಈ ಧಾರಾವಾಹಿಯ ಜನಪ್ರಿಯತೆಯಿಂದಲೇ ಅವರು ಕಿರುತೆರೆಯಿಂದ ಹಿರಿತೆರೆಗೆ ಜಂಪ್ ಮಾಡಿದ್ದು.
ಈಗ ಸುಶಾಂತ್ ಬದುಕುಳಿದಿಲ್ಲ. ಆದರೆ, ಆ ಜನಪ್ರಿಯ ಧಾರಾವಾಹಿಯ ಎರಡನೇ ಸೀಸನ್ ನಿರ್ಮಿಸುವುದರ ಮೂಲಕ ಯಾಕೆ ಸುಶಾಂತ್ಗೆ ಗೌರವ ಸೂಚಿಸಬಾರದು ಎಂದು ನಟಿ ಅಂಕಿತಾ ಲೋಖಂಡೆ, ಆ ಧಾರಾವಾಹಿಯ ನಿರ್ಮಾಪಕಿ ಏಕ್ತಾ ಕಪೂರ್ ಅವರನ್ನು ಕೇಳಿದ್ದಾರೆ.
ಇದನ್ನೂ ಓದಿ: ಕರೊನಾದಿಂದ ಆಸ್ಪತ್ರೆ ಪಾಲಾಗಿದ್ದ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಆರೋಗ್ಯ ಈಗ ಹೇಗಿದೆ?
ಅಂಕಿತಾ ಲೋಖಂಡೆ, ಸುಶಾಂತ್ ಜತೆಗೆ ‘ಪವಿತ್ರ ರಿಶ್ತಾ’ ಧಾರಾವಾಹಿಯಲ್ಲಿ ಜತೆಯಾಗಿ ನಟಿಸಿದ್ದರು. ಅಷ್ಟೇ ಅಲ್ಲ, ಅವರು ಸುಶಾಂತ್ರ ಮಾಜಿ ಪ್ರೇಯಸಿ ಎಂದು ಗುರುತಿಸಿಕೊಂಡಿದ್ದರು. ಈಗ ಸುಶಾಂತ್ ಇಲ್ಲ. ಅವರ ನೆನಪಿನಲ್ಲಿ, ಅವರಿಗೆ ಗೌರವ ಸೂಚಿಸುವುದಕ್ಕೆ ಯಾಕೆ ಸೀಸನ್ 2 ಶುರು ಮಾಡಬಾರದು ಎಂದು ಕೇಳಿದ್ದಾರೆ.
‘ಆ ಧಾರಾವಾಹಿ ಸುಶಾಂತ್ ಅವರ ಹೃದಯಕ್ಕೆ ಬಹಳ ಹತ್ತಿರವಾಗಿತ್ತು ಮತ್ತು ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು. ಅವರ ನೆನಪಿನಲ್ಲಿ ‘ಪವಿತ್ರ ರಿಶ್ತಾ 2′ ಮಾಡಿ, ಅದನ್ನು ಅವರಿಗೆ ಅರ್ಪಿಸಿ’ ಎಂದು ಅಂಕಿತಾ, ಏಕ್ತಾಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹೌಸ್ಫುಲ್-4 ಬಾಲಿವುಡ್ ಸಿನಿಮಾದ ಬಾಲಾ, ಬಾಲಾ… ಹಾಡಿಗೆ ಡೇವಿಡ್ ವಾರ್ನರ್ ಪುತ್ರಿಯರ ನರ್ತನ
ಈ ಸಲಹೆಯನ್ನು ಸ್ವೀಕರಿಸಿರುವ ಏಕ್ತಾ, ಇದೊಂದು ಒಳ್ಳೆಯ ಐಡಿಯಾ ಆಗಿದ್ದು, ತಮ್ಮ ಬರಹಗಾರರ ತಂಡದ ಜತೆಗೆ ಚರ್ಚಿಸಿ, ಕಾರ್ಯರೂಪಕ್ಕೆ ತರುವುದಾಗಿ ಅವರು ಹೇಳಿದ್ದಾರೆ.
ಈ ಹಿಂದೆ ಸಹ, ಏಕ್ತಾ ಅವರು ತಮ್ಮ ಹಳೆಯ ಜನಪ್ರಿಯ ಧಾರಾವಾಹಿಗಳ ಸೀಕ್ವೆಲ್ಗಳನ್ನು ನಿರ್ಮಿಸಿದ್ದರು. ‘ಹಮ್ ಪಾಂಚ್’, ‘ಕಸೌತಿ ಜಿಂದಗೀ ಕೇ’, ‘ನಾಗಿನ್’ ಮುಂತಾದ ಧಾರಾವಾಹಿಗಳ ಸೀಕ್ವೆಲ್ ನಿರ್ಮಾಣ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅದೇ ರೀತಿ, ಮುಂದಿನ ದಿನಗಳಲ್ಲಿ ‘ಪವಿತ್ರ ರಿಶ್ತಾ’ ಧಾರಾವಾಹಿಯ ಸೀಕ್ವೆಲ್ ಬಂದರೂ ಅದರಲ್ಲಿ ಆಶ್ಚರ್ಯವೇನಿಲ್ಲ.
ನಾನು ಹೇಳಿದ್ದು ಪ್ರೂವ್ ಮಾಡ್ಲಿಲ್ಲಾ ಅಂದ್ರೆ ಪದ್ಮಶ್ರೀ ವಾಪಸ್ಸು ಕೊಡ್ತೀನಿ …