More

    ಸಂಭ್ರಮದಿಂದ ನಡೆದ ಅಂಗಡಗೇರಿ ಶ್ರೀ ಸಂಗಮೇಶ್ವರ ಜಾತ್ರೋತ್ಸವ

    ಗೊಳಸಂಗಿ (ವಿಜಯಪುರ) : ಸಮೀಪದ ಅಂಗಡಗೇರಿ ಗ್ರಾಮದಲ್ಲಿ ಭಾನುವಾರ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು. ರುದ್ರಸ್ವಾಮಿ ಹಿರೇಮಠ, ಮುತ್ತಯ್ಯಸ್ವಾಮಿ ಹಿರೇಮಠ ನೇತೃತ್ವದಲ್ಲಿ ಸಂಗಮೇಶ್ವರ ಭವ್ಯ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

    ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಲಶದ ಮೆರವಣಿಗೆ. ವೀರಗಾಸೆ ಸೇರಿ ವಿವಿಧ ವಾದ್ಯಮೇಳಗಳೊಂದಿಗೆ ನಡೆಯಿತು. ಬಳಿಕ ಅಗ್ನಿಪ್ರವೇಶ, ಅನ್ನ ಸಂತರ್ಪಣೆ ನಡೆಯಿತು.

    ಗ್ರಾಮದ ಪ್ರಮುಖರಾದ ರಾಜಕುಮಾರ ದೇಸಾಯಿ, ಪ್ರಮೋದ ಕೊಳಗೇರಿ, ಕಾಶೀರಾಯ ದೇಸಾಯಿ, ರಾಮನಗೌಡ ಪಾಟೀಲ, ನಾಗಪ್ಪ ಕೊಳಗೇರಿ, ಸಿದ್ದನಗೌಡ ಪಾಟೀಲ, ಶಾಂತಗೌಡ ಬಿರಾದಾರ, ರಾಜಕುಮಾರ ಕೊಳಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts