More

    ರಾಧಿಕಾ ಮರ್ಚೆಂಟ್​ರನ್ನೇ ಆರಿಸಿಕೊಂಡಿದ್ದೇಕೆ? ಬಾಳ ಸಂಗಾತಿ ಬಗ್ಗೆ ನಿಜವಾದ ಕಾರಣ ಬಿಚ್ಚಿಟ್ಟ ಅನಂತ್ ಅಂಬಾನಿ! 

    ಮುಂಬೈ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವದ ಸಿದ್ಧತೆಗಳು ಭರದಿಂದ ಪ್ರಾರಂಭವಾಗಿದೆ. ಇದರ ನಡುವೆ ತನ್ನ ಬಾಳ ಸಂಗಾತಿ ಆಯ್ಕೆ ಮತ್ತು ಅದರ ಹಿಂದಿರುವ ಕಾರಣ ಬಗ್ಗೆ ಅನಂತ್ ಮನಬಿಚ್ಚಿ ಮಾತನಾಡಿದ್ದಾರೆ.

    ಇದನ್ನೂ ಓದಿ: ಮತದಾರನಿಗೆ ಹತ್ತಿರವಾಗಲು ‘ಚಾಯ್’ ಮಾರಿದ ಸಚಿವ..!

    ರಾಧಿಕಾ ನನಗೆ ವ್ಯವಹಾರ ಸೇರಿದಂತೆ ಎಲ್ಲದರಲ್ಲೂ ಬೆಂಬಲವಾಗಿ ನಿಲ್ಲುವ ವಿಶ್ವಾಸವಿದೆ. ನನ್ನ ಉದ್ಯಮದಲ್ಲಿ ನಾನು ಇನ್ನೂ ಒಬ್ಬ ವ್ಯಕ್ತಿಯನ್ನು ಹೊಂದಲಿದ್ದೇನೆ. ರಾಧಿಕಾ ಕೂಡ ಈ ಬಗ್ಗೆ ತುಂಬಾ ಉತ್ಸುಕಳಾಗಿದ್ದಾಳೆ. ನಾವಿಬ್ಬರೂ ನನ್ನ ಹೆತ್ತವರ ಆಶೀರ್ವಾದ ಮತ್ತು ನನ್ನ ಒಡಹುಟ್ಟಿದ ಆಕಾಶ್ ಮತ್ತು ಇಶಾ ಅವರ ಸಹಕಾರದೊಂದಿಗೆ ಇನ್ನೂ ಉನ್ನತ ಮಟ್ಟಕ್ಕೆ ಹೋಗುತ್ತೇವೆ ಎಂಬ ವಿಶ್ವಾಸವಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

    ರಾಧಿಕಾ ಪ್ರಾಣಿ ರಕ್ಷಣಾ ಯೋಜನೆಗಾಗಿ ಜಾಮ್‌ನಗರಕ್ಕೆ ಆಗಾಗ್ಗೆ ಭೇಟಿ ನೀಡಬೇಕೆನ್ನುತ್ತಿದ್ದರು. ಈಗ ನನಗೆ ಜಾಮ್‌ನಗರ ನನ್ನ ಮನೆಯಾಗಿದೆ. ಹಾಗಾಗಿ ವಾರಾಂತ್ಯದಲ್ಲಿ ಮತ್ತು ನನಗೆ ರಜೆ ಸಿಕ್ಕಾಗಲೆಲ್ಲಾ ನಾನು ಅಲ್ಲಿ ನೆಲೆಸಲು ಪ್ರಯತ್ನಿಸುತ್ತೇನೆ. ರಾಧಿಕಾ ನನಗಿಂತ ಹೆಚ್ಚಾಗಿ ಪ್ರಾಣಿಗಳನ್ನು ನೋಡಿಕೊಳ್ಳಲು ಬಯಸುತ್ತಾಳೆ. ಆಕೆಗೆ ನನ್ನ ಬೆಂಬಲವಿದೆ. ನಿಜಕ್ಕೂ ಅಂಬಾನಿ ಕುಟುಂಬಕ್ಕೆ ಹೊಂದಿಕೊಳ್ಳುವ ಪರಿಪೂರ್ಣ ಸಂಗಾತಿಯನ್ನು ಕಂಡುಕೊಂಡಿದ್ದಾನೆ. ಈ ಎರಡು ಆತ್ಮಗಳು ಒಬ್ಬರನ್ನೊಬ್ಬರು ಏಕೆ ಆರಿಸಿಕೊಂಡವು ಎಂಬುದಕ್ಕೆ ಕಾರಣ ಸ್ಪಷ್ಟವಾಗಿದೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.

    ಅನಂತ್ ಮತ್ತು ರಾಧಿಕಾ ವಿವಾಹ ಮಹೋತ್ಸವವವು ಮಾರ್ಚ್ 1 ರಿಂದ 3 ರವರೆಗೆ ನಡೆಯಲಿದೆ.

    ಟ್ರಾಫಿಕ್​ ಸಿಬ್ಬಂದಿ​ಗೆ ಥಳಿಸಿದ ನಟಿ ಟಿವಿ ಸಂದರ್ಶನದಲ್ಲಿ ಕ್ಷಮೆಯಾಚಿಸಿದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts