More

    ಬಿಜೆಪಿಯಿಂದ ಟಿಕೆಟ್ ಘೋಷಣೆ ಯಾವಾಗ? ಕೋರ್​ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ

    ಬೆಂಗಳೂರು: ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ ರಾಜ್ಯ ಬಿಜೆಪಿ ನಾಯಕರಿಗೆ ಉತ್ಸಾಹ ತುಂಬಿದ್ದಾರೆ. ಈ ಸಂದರ್ಭ ಅವರು ಒನ್‌ಲೈನ್ ಸ್ಟೇಟ್‌ಮೆಂಟ್ ಮಾಡಿದ್ದು ‘ನಾವೇ ಅಧಿಕಾರಕ್ಕೆ ಬರುತ್ತೇವೆ ಬರೆದಿಟ್ಟುಕೊಳ್ಳಿ’ ಎಂದಿದ್ದಾರೆ.

    ಕೋರ್​ ಕಮಿಟಿ ಸಭೆಯಲ್ಲಿ ಮಾತನಾಡಿದ ಅಮಿತ್ ಷಾ, ‘ಮೊದಲು ನೀವೆಲ್ಲಾ ನಿಮ್ಮ ನಿಮ್ಮ ಡೈರಿ ತೆಗೆದು ಬರೆದಿಟ್ಟುಕೊಳ್ಳಿ. ಸ್ಪಷ್ಟ‌ ಬಹುಮತ ಈ ಬಾರಿ ಬಿಜೆಪಿಗೆ ಬರಲಿದೆ. ಈಗಾಗಲೇ ನಾನು ಸಾಕಷ್ಟು ಹೋಮ್ ವರ್ಕ್ ಮಾಡಿದ್ದೇನೆ. ಅನುಮಾನವೇ ಬೇಡ.. ಬಿಜೆಪಿ ಸ್ಪಷ್ಟ ಬಹುಮತ ಬರಲಿದೆ. ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ತಲೆ ಕೆಡಿಸಿಕೊಳ್ಳಬೇಡಿ. ಒಳ್ಳೆಯ ಕೆಲಸ ಮಾಡಿ, ಪ್ಲಾನ್ ಮಾಡಿ ಮೀಸಲಾತಿ ಹಂಚಿಕೆ ಮಾಡಿದ್ದೀರಿ. ನಮಗೆ ಇರುವ ಒಂದೇ ಒಂದು ಕೊರತೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಿದ್ದು. ಅದನ್ನು ಸರಿದೂಗಿಸಿಬಿಟ್ಟರೇ, ಸ್ಪಷ್ಟ ಬಹುಮತ ಗ್ಯಾರೆಂಟಿ’ ಎಂದು ಹೇಳಿದ್ದಾರೆ.

    ಧೈರ್ಯವಾಗಿ ಚುನಾವಣೆ ಎದುರಿಸುವಂತೆ ರಾಜ್ಯ ನಾಯಕರಿಗೆ ಕರೆ ನೀಡಿದ್ದು ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಟಿಕೆಟ್ ಘೋಷಣೆ ಮಾಡುವುದಾಗಿ ಅಮಿತ್ ಷಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts