ಕರೊನಾದಿಂದ ಲಕ್ಷಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಎಷ್ಟೋ ಜನ ಊಟಕ್ಕೆ ಪರದಾಡುತ್ತಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಇಂಥದ್ದೊಂದು ಪರಿಸ್ಥಿತಿಯಿಂದ ಕಂಗಾಲಾಗಿ ಅದೆಷ್ಟೋ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಂಥ ಸಮಯದಲ್ಲಿ ಅಮಿತಾಭ್ ಬಚ್ಚನ್ ಅವರು ಒಂದು ಹೊಸ ಐಷಾರಾಮಿ ಕಾರು ಖರೀದಿಸುವ ಮೂಲಕ ಹಲವರ ಕಂಗೆಣ್ಣಿಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ಸಂಬರಗಿ ಯಾರು, ಸ್ಯಾಂಡಲ್ವುಡ್ಗೆ ಏನು ಮಾಡಿದ್ದಾರವರು; ಸಾರಾ ಗೋವಿಂದು ಕಿಡಿ
ಅಮಿತಾಭ್ ಇತ್ತೀಚೆಗೆ ಹೊಸ ಕಾರೊಂದನ್ನು ಖರೀದಿಸಿದ್ದಾರೆ. ಅವರಿಗೆ ಕಾರು ಹಸ್ತಾಂತರಿಸುತ್ತಿರುವ ಫೋಟೋಗಳು ಇದೀಗ ಇಂಟರ್ನೆಟ್ನಲ್ಲಿ ಹರಿದಾಡುತ್ತಿವೆ. ಈ ಫೋಟೋಗಳನ್ನು ನೋಡಿರುವ ಹಲವರು ಅಮಿತಾಭ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಮುಖವಾಗಿ ಇದು ಕರೊನಾ ಸಮಯ. ಇಡೀ ಜಗತ್ತೇ ಇದರಿಂದ ತತ್ತರಿಸುತ್ತಿರುವಾಗ, ಅಮಿತಾಭ್ಗೆ ಹೀಗೆ ಮಜಾ ಮಾಡುವುದಕ್ಕೆ ಮನಸ್ಸಾದರೂ ಹೇಗೆ ಬಂತು ಎಂದು ಹಲವರು ಪ್ರಶ್ನಿಸಿದ್ದಾರೆ. ಅಮಿತಾಭ್ ಹತ್ತಿರ ಕಾರ್ ಇಲ್ಲದಿರಬಹುದು, ಅದಕ್ಕೇ ಅವರು ಇಂಥದ್ದೊಂದು ಸಂದರ್ಭದಲ್ಲಿ ಕಾರ್ ಖರೀದಿಸಿದ್ದಾರೆ ಎಂದು ವ್ಯಂಗ್ಯ ಆಡಿದ್ದಾರೆ. ಇನ್ನೂ ಕೆಲವರು ಇದು ಶೋಆಫ್ ಮಾಡುವ ಹೊತ್ತಲ್ಲ ಎಂದಿದ್ದಾರೆ. ಅಷ್ಟೊಂದು ಹಣ ಇದ್ದರೆ, ಅದನ್ನು ಯಾಕೆ ದಾನ ಮಾಡಬಾರದು ಎಂದು ಕೇಳಿದವರೂ ಇದ್ದಾರೆ.
ಇದನ್ನೂ ಓದಿ: ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡಿದ ಪವರ್ ಸ್ಟಾರ್ ಪುನೀತ್
ಈ ನಿಟ್ಟಿನಲ್ಲಿ ಸುಶಾಂತ್ ಸಿಂಗ್ ಅಭಿಮಾನಿಗಳು ಸಹ ಅಮಿತಾಭ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುಶಾಂತ್ ಸತ್ತಾಗಿನಿಂದ ಅಮಿತಾಭ್ ಎಲ್ಲೂ ಚಕಾರವೆತ್ತಿಲ್ಲ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಅವರ ಸಾವಿನ ನಂತರ ದೊಡ್ಡ ಹೋರಾಟ ನಡೆಯುತ್ತಿದ್ದು, ಯಾವ ವಿಷಯದ ಬಗ್ಗೆಯೂ ಮಾತನಾಡದ ಅಮಿತಾಭ್ ಈಗ ಕಾರ್ ಖರೀದಿಸುವುಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
ಚಿರು ಸರ್ಜಾ ಹೆಸರು ಸೇರಿಸಿದ್ದಕ್ಕೆ, ಆ ಮಗು ಮೇಘನಾ ಸ್ಥಿತಿ ಏನಾಗಿರಬೇಡ; ದೊಡ್ಡಣ್ಣ